ಉಡುಪಿ, ಜೂ.02 (DaijiworldNews/TA): "ಇಲ್ಲ ಸಲ್ಲದ ಭಯ ಪರೀಕ್ಷೆ ಭಯ" ಕನ್ನಡ ಸಿನೆಮಾವನ್ನು ಉಡುಪಿಯ ಪಿಪಿಸಿ ಸಭಾಂಗಣದಲ್ಲಿ ದೊಡ್ಡದಾದ LED ಸ್ಕ್ರೀನ್ ನಲ್ಲಿ ಸದ್ಯದಲ್ಲೇ ಪ್ರದರ್ಶಿಸಲಾಗುವುದು ಎಂದು ಸಿನೆಮಾ ನಿರ್ಮಾಪಕ ನಿರ್ದೇಶಕ ವಿ.ಪಿ. ಡೇಸಾ ತಿಳಿಸಿದರು.

ಅವರು ಈ ಬಗ್ಗೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳು ಆತ್ಮಹತ್ಯೆ ಮಾಡುವುದು, ಮನೆ ಬಿಟ್ಟು ಓಡಿ ಹೋಗುವುದು ಇಂತಹ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುವ ಪರೀಕ್ಷೆ ಹೆದರಿಕೆಯನ್ನು ಓಡಿಸಲೆಂದೇ ತಯಾರಾದ ಶೈಕ್ಷಣಿಕ ಸಾಮಾಜಿಕ ಚಲನಚಿತ್ರವಾಗಿದೆ.
ಇದರಲ್ಲಿ 20 ವಿವಿಧ ರೀತಿಯ ಪರೀಕ್ಷೆ ಹೆದರಿಕೆಗಳಿಗೆ 6 ರೀತಿಯ ಪರಿಹಾರೋಪಾಯಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದಲ್ಲಿ ನಟಿಸಿದ ಪ್ರಾಧ್ಯಾಪಕಿ ಅಶ್ವಿನಿ ಶೀತಲ್ ದಾಂತೀಸ್ ,ಪ್ರದೀಪ್ ಗುಡ್ಡಟ್ಟು,ಇ ಸಂದರ್ಭದಲ್ಲಿ ಉಪಸ್ಥಿತರಿದ್ದರು.