ಮುಂಬೈ, ಆ. 11 (DaijiworldNews/AA): ಸಿನಿಮಾ ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ನಟರು ಪ್ರಾಜೆಕ್ಟ್ ತೊರೆಯುವುದು ಇತ್ತೀಚೆಗೆ ಒಂದು ಹೊಸ ಅಭ್ಯಾಸವಾಗಿದೆ ಎಂದು ನಟ ರಣವೀರ್ ಸಿಂಗ್ಗೆ ಪರೋಕ್ಷವಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಟಾಂಗ್ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ 'ದಿಲ್ ಚಾಹ್ತಾ ಹೈ' ಚಿತ್ರದ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, "ಆಗ ನಟ ಸೈಫ್ ಅಲಿ ಖಾನ್ ಶೂಟಿಂಗ್ ಆರಂಭಕ್ಕೂ ಮುನ್ನ ದಿನಾಂಕದ ಸಮಸ್ಯೆಯಿಂದಾಗಿ ಹೊರನಡೆಯಲು ನಿರ್ಧರಿಸಿದ್ದರು. ಶೂಟಿಂಗ್ಗೆ ಕೇವಲ ಒಂದು ತಿಂಗಳು ಬಾಕಿ ಇದ್ದಾಗ ನಟರು ಸಿನಿಮಾ ಬಿಟ್ಟು ಹೋಗುವುದು ಇತ್ತೀಚೆಗೆ ಸಾಮಾನ್ಯ ಅಭ್ಯಾಸವಾಗಿದೆ" ಎಂದು ವ್ಯಂಗ್ಯವಾಡಿದ್ದಾರೆ.
'ಡಾನ್ 3' ಚಿತ್ರದ ಪ್ರಮುಖ ಚಿತ್ರೀಕರಣ ಆರಂಭಕ್ಕೆ ಕೆಲವೇ ವಾರಗಳಿದ್ದಾಗ ನಟ ರಣವೀರ್ ಸಿಂಗ್ ಹೊರನಡೆದಿದ್ದರು. 'ಚಿತ್ರದ ಸ್ಕ್ರಿಪ್ಟ್ ತಮಗೆ ಪೂರ್ತಿ ಸರಿ ಇರಲಿಲ್ಲ. ಅದರ ಜೊತೆಗೆ ಸಿನಿಮಾದ ಬಜೆಟ್ ಅನ್ನು 350 ಕೋಟಿಯಿಂದ 150 ಕೋಟಿಗೆ ಕಡಿತಗೊಳಿಸಲಾಗಿತ್ತು. ಅಲ್ಲದೆ ತಮಗೆ ಸರಿಯಾಗಿ ನೀಡಬೇಕಿದ್ದ ಮುಂಗಡ ಹಣ ಸಿಕ್ಕಿರಲಿಲ್ಲ' ಎಂದು ಅವರು ಆರೋಪಿಸಿದ್ದರು. ಇನ್ನು ಸಿನಿಮಾದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ವಿಚಾರವು ಬಾಲಿವುಡ್ನಲ್ಲಿ ಭಾರಿ ಸದ್ದು ಮಾಡಿತ್ತು.