ಬಹ್ರೇನ್, ಮೇ. 03 (DaijiworldNews/TA): ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ವತಿಯಿಂದ ಕರ್ನಾಟಕ ಸೋಶಿಯಲ್ ಕ್ಲಬ್ನಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.






ಈ ಕಾರ್ಯಕ್ರಮದಲ್ಲಿ ಇಬ್ಬರು ತಜ್ಞರಾದ ಡಾ. ಬುಶ್ರಾ ಇಬ್ರಾಹಿಂ, ಕನ್ಸಲ್ಟೆಂಟ್ ಸ್ತ್ರೀರೋಗ ತಜ್ಞೆ ಮತ್ತು ಡಾ. ಅಶ್ಮಿಯಾ ಅಬ್ದುಲ್ ರಜಾಕ್, ಕನ್ಸಲ್ಟೆಂಟ್ ಚರ್ಮರೋಗ ತಜ್ಞೆ ಇವರಿಂದ ಮಾಹಿತಿಯುಕ್ತ ಭಾಷಣಗಳು ನಡೆದವು. ಇಬ್ಬರೂ ವೈದ್ಯರು ಸಂತಾನೋತ್ಪತ್ತಿ ಮತ್ತು ಚರ್ಮದ ಆರೋಗ್ಯದಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು ಜೊತೆಗೆ ಆರೈಕೆ ಸಲಹೆಗಳನ್ನು ಹಂಚಿಕೊಂಡರು.
ನಂತರ ಸಂವಾದಾತ್ಮಕ ಪ್ರಶ್ನೋತ್ತರ ಅವಧಿ ನಡೆಯಿತು, ಈ ಅವದಿಯಲ್ಲಿ ಅನೇಕರು ಪ್ರಶ್ನೆಗಳನ್ನು ಕೇಳಿದರು. ಅವರ ಸಂದೇಹಕ್ಕೆ ಸೂಕ್ತ ಪರಿಹಾರ ನೀಡಲಾಯಿತು. ಜೊತೆಗೆ ಈ ವೇಳೆ ಉಚಿತ ವೈಯಕ್ತಿಕ ಸಮಾಲೋಚನೆಗಳು ನಡೆದವು. ಈ ವಿಭಿನ್ನ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಭಾಗಿಯಾದ ಮಹಿಳೆಯರ ಮನ್ನಣೆಗಳಿಸಿತು.