ಸಿಡ್ನಿ, ಡಿ. 15 (DaijiworldNews/AA): ಆಸ್ಟ್ರೇಲಿಯಾದ ಬೊಂಡಿ ಬೀಚ್ನಲ್ಲಿ ಯಹೂದಿ ಹಬ್ಬದ ವೇಳೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಆರೋಪಿ ನವೀದ್ನ ತಾಯಿ ವೆರೀನಾ ತನ್ನ ಮಗನನ್ನು ಒಳ್ಳೆಯವನು ಎಂದು ಸಮರ್ಥಿಸಿಕೊಂಡಿದ್ದಾರೆ.

"ತನ್ನ ಮಗನ ಬಳಿ ಬಂದೂಕು ಇಲ್ಲ. ಅವನು ಹಾಗೆಲ್ಲ ಹೊರಗೆ ಹೋಗುವುದಾಗಲಿ, ಸ್ನೇಹಿತರೊಂದಿಗೆ ಬೆರೆಯುವುದಾಗಲಿ ಮಾಡುವುದಿಲ್ಲ. ಅವನು ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ. ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ, ಜಿಮ್ಗೆ ಹೋಗುತ್ತಾನೆ ಅಷ್ಟೇ. ನನ್ನ ಮಗನಂತಹ ಮಗನನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಅವನು ಒಳ್ಳೆಯ ಹುಡುಗ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ನವೀದ್ ಮತ್ತು ಸಾಜಿದ್ ವಾರಾಂತ್ಯದಲ್ಲಿ ಪ್ರವಾಸಕ್ಕಾಗಿ ಜೆರ್ವಿಸ್ ಕೊಲ್ಲಿಗೆ ಹೋಗಿದ್ದರು. ನನಗೆ ಕರೆ ಮಾಡಿ, ಅಮ್ಮ, ನಾನು ಈಜಲು ಹೋಗಿದ್ದೆ. ಸ್ಕೂಬಾ ಡೈವಿಂಗ್ಗೆ ಹೋಗಿದ್ದೆವು ಎಂದು ಹೇಳಿದ್ದ. ನನ್ನ ಮಗ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ನಾನು ನಂಬುವುದಿಲ್ಲ" ಎಂದಿದ್ದಾರೆ.
ನವೀದ್ ಮತ್ತು ಸಾಜಿದ್ ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ದಾಳಿಯ ನಂತರದ ಕೆಲವು ಸಮಯದ ಬಳಿಕ ನವೀದ್ ಬಂದೂಕು ಹಿಡಿದಿರುವ ಚಿತ್ರಗಳು ವೈರಲ್ ಆಗಿದ್ದವು. ಸಾಜಿದ್ನನ್ನು ಪೊಲೀಸರು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದು, ನವೀದ್ ಗಂಭೀರವಾಗಿ ಗಾಯಗೊಂಡಿದ್ದನು.
ನವೀದ್ ಇಟ್ಟಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಮಾಡುತ್ತಿದ್ದ ಕಂಪನಿ ದಿವಾಳಿಯಾದಾಗ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆತನ ತಂದೆ ಸಾಜಿದ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ.