ಮಂಗಳೂರು,ಫೆ.22 (DaijiworldNews/AK): ಕೇರಳದ ಮಂಜೇಶ್ವರ ಪಂಚಾಯಿತಿ ವ್ಯಾಪ್ತಿಯ ಗಡಿನಾಡ ಕನ್ನಡಿಗರಿಗೆ ತಲಪಾಡಿ ಟೋಲ್ ಗೇಟ್ನಲ್ಲಿ ವಿನಾಯಿತಿ ನೀಡುವಂತೆ ಹಲವು ಸಮಯಗಳಿಂದ ಬೇಡಿಕೆ ಇದ್ದರೂ ಟೋಲ್ ಸಂಸ್ಥೆಗಳು ಸ್ಪಂದಿಸಿಲ್ಲ. ಇದನ್ನು ಖಂಡಿಸಿ ತಲಪಾಡಿ ಟೋಲ್ ಗೇಟ್ನಲ್ಲಿ ಗಡಿ ಪ್ರದೇಶದ ಜನರಿಗೆ ಆಗುತ್ತಿರುವ ಅನ್ಯಾಯಕ್ಕೆ ಪರ್ಯಾಯ ಮಾರ್ಗ, ಹೆದ್ದಾರಿಯ ಹತ್ತಿರದಲ್ಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ತಲಪಾಡಿ ಟೋಲ್ ಗೇಟ್ ಸ್ಥಾಪಿಸಿದ ಆರಂಭದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದ ಐದು ಕಿ.ಮೀ ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ನಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಬಳಿಕ ಕೇರಳ ಭಾಗದ ಜನರಿಗೆ ವಿನಾಯಿತಿ ರದ್ದು ಮಾಡಿತ್ತು. ಇದನ್ನು ಖಂಡಿಸಿ ಸರ್ವಪಕ್ಷಗಳು ಹಾಗೂ ಸಮಾನ ಮನಸ್ಕರ ನೇತೃತ್ವದ ಮಂಜೇಶ್ವರ ಟೋಲ್ ಗೇಟ್ ಕ್ರಿಯಾಸಮಿತಿ ರಚಿಸಿ ಹೋರಾಟ ನಡೆಸಲಾಗಿತ್ತು.
ಈಗಿನ ರಾಷ್ಟ್ರೀಯ ಹೆದ್ದಾರಿಗೂ ಮೊದಲು ಬೇರೆ ರಸ್ತೆ ಇದ್ದ ಬಗ್ಗೆ ಮಾಹಿತಿ ಲಭಿಸಿದ್ದು, ಅದರಂತೆ ಮಂಗಳೂರು ಸಂಪರ್ಕಿಸಲು ಪ್ರತ್ಯೇಕ ರಸ್ತೆ ನಿರ್ಮಾಣದ ಯೋಜನೆ ಸಿದ್ಧಗೊಂಡಿದೆ. ತಲಪಾಡಿ ಮರಿಯಾಶ್ರಮ ಚರ್ಚ್ ಹಿಂಭಾಗದ ಹಳೆಯ ರಾಷ್ಟ್ರೀ ಯ ಹೆದ್ದಾರಿ ಮೂಲಕ ಸಾಗಿ ನದಿಗೆ ಸೇತುವೆ ನಿರ್ಮ ಸಿ ಮಂಗಳೂರು ರಸ್ತೆಗೆ ಸಂಪರ್ಕಿಸುವ ಯೋಜನೆಯಾಗಿದೆ.
ಮಂಜೇಶ್ವರ ಆಡಳಿತಾತ್ಮಕವಾಗಿ ಕೇರಳದಲ್ಲಿ ಇದ್ದರೂ ಈ ಭಾಗದ ಜನರು ಉದ್ಯೋ ಗ, ಶಿಕ್ಷಣಕ್ಕೆ ಮಂ ಗಳೂರನ್ನೇ ಆಶ್ರಯಿಸಿದ್ದಾರೆ. ಆದರೆ, ನಿತ್ಯ ಇಲ್ಲಿ ಟೋ ಲ್ ಪಾವತಿಸಿ ಬರುವ ಅನಿವಾರ್ಯತೆಯಿಂದ ಅವರಿಗೆ ಸಂಕಷ್ಟ ಉಂಟಾಗಿದೆ.
ಹೀಗಾಗಿ ಹಲವು ಬಾರಿ ಮಂಜೇಶ್ವರ ಗ್ರಾ.ಪಂ ವ್ಯಾಪ್ತಿಯ ನಾಗರಿಕರು ಮತ್ತು ಹೋ ರಾಟ ಸಮಿತಿ ಮನವಿ ಮಾಡಿದರೂ ಟೋಲ್ ಗೇಟ್ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿಲ್ಲ. ಹೀಗಾಗಿ ಗಡಿನಾಡ ಜನರು ಪರ್ಯಾಯ ರಸ್ತೆ ನಿರ್ಮಾಣದ ಯೋಜನೆ ರೂಪಿಸಿದ್ದಾರೆ.ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಮಂಜೇಶ್ವರ ಗ್ರಾಮ ಪಂಚಾಯಿತಿಯ ನಿಲುವನ್ನು ಕರ್ನಾಟಕದ ತಲಪಾಡಿ ಹಾಗೂ ಸೋಮೇಶ್ವರ ಪಂಚಾಯಿತಿಗಳು ಬೆಂಬಲಿಸಿವೆ. ಈ ರಸ್ತೆಯಾದರೆ ಮಂಗಳೂರಿಗರೂ ಇದೇ ರಸ್ತೆ ಬಳಸಿ ಕೇರಳ ತಲುಪಲು ಸಾಧ್ಯವಾಗಲಿದೆ. ಹೀಗಾಗಿ ತಲಪಾಡಿ ಹಾಗೂ ಸೋಮೇಶ್ವರ ಪಂಚಾಯಿತಿ ಬೆಂಬಲ ಸೂಚಿಸಿವೆ ಎನ್ನಲಾಗಿದೆ.