ಬೆಳ್ತಂಗಡಿ,ಮಾ.20(DaijiworldNews/TA):ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಡಂತ್ಯಾರು ಇವರ ಪ್ರಾಯೋಜಕತ್ವ ಮತ್ತು ಶಾಸಕರ ಅನುದಾನದಲ್ಲಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಉನ್ನತ ಮಟ್ಟದ ಸಭಾಭವನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಮಾ. 8ರಂದು ಜರುಗಿತು.



ಶಾಸಕ ಹರೀಶ್ ಪೂಂಜ ಅವರು ನೂತನ ಸಭಾ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ತಾಲೂಕಿಗೆ ಮಾದರಿಯಾಗಿದೆ. ಈ ಶಾಲೆಯಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಇದನ್ನು ಪೂರೈಸಲು ಆದ್ಯತೆ ನೀಡಲಾಗುವುದು. ಶಾಲೆಯಲ್ಲಿ ನೂತನ ಸಭಾ ಭವನ ನಿಮಾರ್ಣಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಕೈಜೋಡಿಸಿರುವುದು ಅಭಿನಂದನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪಾರೆಂಕಿ ದೇವಸ್ಥಾನದ ಪ್ರಧಾನ ಇವರ ಪ್ರಾಯೋಜಕತ್ವ ಹಾಗೂ ಸಾಸಕರ ಅನುದಾನದಡಿಯ ಸಂಭವಾನಿ ಮಾಶಾಸಕರ ನಿಧಿಯಿಂದ ರೂ.25ಲಕ್ಷ ಅನುದಾನ: ಶಾಸಕ ಹರೀಶ್ ಪೂಂಜ ನಾನು ಈ ಶಾಲೆಯ ಹಳೆ ವಿದ್ಯಾರ್ಥಿ, ಶಾಸಕನಾದ ಪ್ರಥಮದಲ್ಲಿ, ತಾಲೂಕಿನಲ್ಲಿ ಕೆಪಿಎಸ್ ಶಾಲೆ ಮಾಡಬೇಕು ಎಂಬ ಕಲ್ಪನೆ ಇತ್ತು. ಕೆಪಿಎಸ್ ಮಾದರಿಯಲ್ಲಿ ಶಾಲೆಗಳ ನಿರ್ಮಾಣವಾಗಬೇಕು ಎಂದು ಸರಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಾಗ, ನಮ್ಮ ತಾಲೂಕಿನಲ್ಲಿ ಯಾವುದನ್ನು ಮಾಡುವುದು ಎಂದು ಆಲೋಚಿಸಿದಾಗ, ನನ್ನ ಮೊದಲ ಆಯ್ಕೆ ಪುಂಜಾಲಕಟ್ಟೆ ಶಾಲೆ. ಸುಮಾರು 3.50 ಕೋಟಿ ರೂ. ಅನುದಾನವನ್ನು ಈ ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ತಂದು, ಇವತ್ತು ವಿದ್ಯಾರ್ಥಿಗಳು, ಪೋಷಕರು ಬಯಸುವ ರೀತಿಯಲ್ಲಿ ನಮ್ಮ ಪುಂಜಾಲಕಟ್ಟೆ ಶಾಲೆ ಬೆಳೆದು ನಿಂತಿದೆ. ಮೂರು ಶಾಲೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಒಂದು ಸುಸಜ್ಜಿತವಾದ ಸಭಾಂಗಣ ನಿರ್ಮಾಣವಾಗಬೇಕು ಎಂಬ ಕನಸನ್ನು ಹೊತ್ತುಕೊಂಡಿದ್ದೆ. ಇಂದು ಸೇಕ್ರೆಡ್ ಹಾರ್ಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ನಿರ್ದೇಶಕರು, ಸಿಬ್ಬಂದಿ ವರ್ಗದವರು ಒಟ್ಟು ಸೇರಿ ರೂ.25ಲಕ್ಷ ಕೊಡುಗೆಯಾಗಿ ನೀಡಿದ್ದಾರೆ. ಇವತ್ತು ವಿದ್ಯಾರ್ಥಿಗಳ ಕನಸು ನನಸಾಗಿದೆ ಎಂದರು.
ಅರ್ಚಕ ಶ್ರೀಧರ ರಾವ್ ಪೇಜಾವರ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಲಿಯೋ ನೊರೊನ್ಹಾ ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾಮ ಮುಖ್ಯ ಸಲಹೆಗಾರ ಪಂಚಾಯತ್ ಅಧ್ಯಕ್ಷೆ ರೂಪ, ಸೊಸೈಟಿಯ ಮೋನಪ್ಪ ಪೂಜಾರಿ ಉಪಾಧ್ಯಕ್ಷ ಹೆನ್ರಿ ಮೋರಾಸ್, ನಿರ್ದೇಶಕರಾದ ಕಂಡತ್ಯಾರು, ಮುಖ್ಯ ಗ್ರೆಗರಿ ಸೇರಾ, ಜೋಯಲ್ ಗೋಡ್ ಕಾರ್ಯನಿರ್ವಹಣಾಧಿಕಾರಿ ವಲೇರಿಯನ್ ಡಿಸೋಜ, ಪ್ರೌಢಶಾಲಾ ಶಿಕ್ಷಕಿ ಕುಮುದಾ, ಮೆಂಡೋನ್ಸಾ ಲಿಯೋ ರೊಡ್ರಿಗಸ್, ವಿವೇಕ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಅನಿತಾ ಬರೆಯೊ, ಶಾಲಾಭಿವೃದ್ಧಿ ಸಮಿತಿ ವಿನ್ಸೆಂಟ್ ಪ್ಯಾಸ್, ಫ್ರಾನ್ಸಿಸ್ ವಿ.ವಿ. ರೊನಾಲ್ಡ್ ಸದಸ್ಯ ದಿವಾಕರ ಶೆಟ್ಟಿ ಕಂಗಿತ್ತು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸಿಕ್ವೆರಾ, ಸಿರಿಲ್ ಸಿಕ್ವೆರಾ, ಸೆಲೆಸ್ತಿನ್ ಡಿ'ಸೋಜ, ಸದಸ್ಯರು, ಪೋಷಕರು, ಉಪನ್ಯಾಸಕರು, ಉಪಸ್ಥಿತರಿದ್ದರು. ಸರೋಜಿನಿ ಆಚಾರ್ಯ ಗ್ರೇಸಿ ರೀಟಾ ರೆಬೆಲ್ಲೊ, ಫೆಲಿಕ್ಸ್ ಡಿ'ಕೋಸ್ತ, ಸ್ವಾಗತಿಸಿ, ಶಿಕ್ಷಕ ಧರಣೇಂದ್ರ ಜೈನ್ ನಿರೂಪಿಸಿ, ಜಯಶ್ರೀ ವಂದಿಸಿದರು.