ಮಂಗಳೂರು, ಏ.09(DaijiworldNews/TA): ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಸಾಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಕಾಯ್ದೆ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ಎ.11 ಶುಕ್ರವಾರ ಸಂಜೆ 4 ಗಂಟೆಗೆ ತಲಪಾಡಿಯ ಕೆ.ಸಿ.ರೋಡ್ ಜಂಕ್ಷನ್ ಅಲ್ ಮುಬಾರಕ್ ಜುಮಾ ಮಸೀದಿ ಬಳಿ ನಡೆಯಲಿದೆ ಎಂದು ಸಂಯುಕ್ತ ನಾಗರಿಕ ವೇದಿಕೆ ಅಧ್ಯಕ್ಷ ಯು.ಅಬ್ದುಲ್ ಸಲಾಂ ಹೇಳಿದರು.

ಅವರು ಸಂಯುಕ್ತ ನಾಗರಿಕ ವೇದಿಕೆ ವತಿಯಿಂದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಾವೇಶದಲ್ಲಿ ಉಳ್ಳಾಲ ತಾಲೂಕು ಮಟ್ಟದ ಮಸೀದಿ, ಮದ್ರಸ, ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳ ಅಧ್ಯಕ್ಷರು , ಪದಾಧಿಕಾರಿಗಳು ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು, ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ. ಕೆ.ಸಿ.ರೋಡ್ ಮಸೀದಿ ಸಂಯುಕ್ತ ಉಪ ಖಾಝಿ ಕೆ.ಪಿ.ಹುಸೈನ್ ಸ ಅದಿ ಕೆ.ಸಿ.ರೋಡ್ , ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಕಾರ್ಯಕ್ರಮ ದ ನೇತೃತ್ವ ವಹಿಸಲಿದ್ದಾರೆ.
ಕೆ.ಸಿ.ರೋಡ್ ಜುಮಾ ಮಸೀದಿ ಖತೀಬ್ ಮೌಲಾನ ಮುನೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ವಕೀಲ ಮುಝಪ್ಫರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಅಡ್ವೋಕೇಟ್ ಸುಧೀರ್ ಕುಮಾರ್ ಮರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು. ಕಾರ್ಯಕ್ರಮ ದಲ್ಲಿ ಮೌಲಾನ ಮುಹಮ್ಮದ್ ಅಲಿ ತುರ್ಕಳಿಕೆ, ಮುಸ್ತಾಕ್ ಹೆಣ್ಣಾಬೈಲ್, ಯಾಕೂಬ್ ಕಳ್ಳರ್ಪೆ, ಎ.ಕೆ.ಕುಕ್ಕಿಲ, ಸೈಫುಲ್ಲಾ ತಂಙಳ್ ಮಂಜೇಶ್ವರ, ಅಡ್ವೊಕೇಟ್ ಹನೀಫ್ ಹುದವಿ, ರಿಯಾಝ್ ಕದುಂಬು,ಅಬ್ದುಲ್ ರಶೀದ್ ಝೈನಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸ್ಥಾಪಕ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ತರಾತುರಿಯಲ್ಲಿ ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು,ಮುಸ್ಲಿಮರಿಗಾಗಿ ದಾನ ನೀಡಿದ ಭೂಮಿ ಮಾತ್ರ ವಕ್ಫ್ ನಲ್ಲಿ ಇದೆ. ವಕ್ಫ್ ಭೂಮಿ ಯಾರಿಗೂ ತೊಂದರೆ ಕೊಡಲಿಲ್ಲ. ವಕ್ಫ್ ನಲ್ಲಿ ರುವ ಲಕ್ಷಗಟ್ಟಲೆ ಎಕರೆ ಭೂಮಿ ಯಾರಿಂದ ಕಿತ್ತು ಕೊಂಡದ್ದಲ್ಲ.ಎಲ್ಲರೂ ದಾನ ನೀಡಿದ ಭೂಮಿಯಾಗಿದೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಸಂಯುಕ್ತ ನಾಗರಿಕ ವೇದಿಕೆ ಉಳ್ಳಾಲ ತಾಲೂಕು ಇದರ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ, ಸಂಚಾಲಕ ಇರ್ಶಾದ್ ಅಜ್ಜಿನಡ್ಕ,ಸ್ಥಾಪಕ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಕೋಶಾಧಿಕಾರಿ ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.