ಬಂಟ್ವಾಳ, ಏ.12 (DaijiworldNews/AK): ಕ್ಯಾಂಪ್ಕೋ ಸಂಸ್ಥೆಯ " ಸಾಂತ್ವನ " ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮಂಚಿ ಶಾಖೆಯ ಸದಸ್ಯ ಸುರೇಶ ಕುಮಾರ್ ಕೆ ಅವರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ 45318 ರೂ.ಸಹಾಯಧನವನ್ನು ಶನಿವಾರ ವಿತರಿಸಲಾಯಿತು.

ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಯಸ್ ಆರ್ ಸತೀಶ್ಚಂದ್ರ ರವರು ಫಲಾನುಭವಿಗೆ ಸಂಸ್ಥೆಯ ಮಂಚಿ ಶಾಖೆಯಲ್ಲಿ ಸಹಾಯಧನದ ಚೆಕ್ ನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪ್ರಾಂತೀಯ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ, ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೇಶವ ರಾವ್ , ಮಂಚಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ಕಲ್ಲಾಡಿ , ಪ್ರಮುಖರಾದ ರಮೇಶ್ ರಾವ್ ಪತ್ತುಮುಡಿ,ಮಂಚಿ ಶಾಖಾ ಪ್ರಭಂದಕ ಸಂತೋಷ್, ಶಾಖಾ ಸಿಬ್ಬಂದಿಗಳು,ಮತ್ತಿತರರು ಹಾಜರಿದ್ದರು