ಮಂಗಳೂರು : ಪೆಜಾರು ಸಂತ ಜೋಸೆಫ್ ಚರ್ಚ್ ನ 241ನೇ ವರ್ಷದ ಶಿಲುಬೆ ಹಾದಿ ಆಚರಣೆ
Wed, Apr 16 2025 02:06:39 PM
ಮಂಗಳೂರು, ಏ.16(DaijiworldNews/TA): ಕಳವಾರು ಪೆಜಾರು(ಪೇಜಾವರ) ಸಂತ ಜೋಸೆಫರ ದೇವಾಲಯದಲ್ಲಿ 241ನೇ ವರ್ಷದ ಪವಿತ್ರಶಿಲುಬೆ ಯಾತ್ರೆ ಚರ್ಚ್ನ ಧರ್ಮಗುರು ವಂ। ರೊನಾಲ್ಡ್ ಡಿ'ಸೋಜಾ ಅವರ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ಯೇಸುಕ್ರಿಸ್ತರ ಜನನದ ಜ್ಯುಬಿಲಿ ವರ್ಷದ ಪ್ರಯುಕ್ತ 'ಪವಿತ್ರ ಶಿಲುಬೆಯ ನೆರಳಿನಲ್ಲಿ ಭರವಸೆಯ ಪಯಣಿಗರು' ಧೈಯ ವಾಕ್ಯದೊಂದಿಗೆ ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ದೇವರ ವಾಕ್ಯದ ಧ್ಯಾನಕೂಟ, ಸ್ತುತಿ ಆರಾಧನೆ ಹಾಗೂ ಬಿನ್ನಹ ಪ್ರಾರ್ಥನೆ ನಡೆಯಿತು. ಕರುಣೆಯ ಜಪಸರ ಪ್ರಾರ್ಥನೆಯ ಬಳಿಕ ಕೊರ್ಡೆಲ್ ಚರ್ಚಿನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್ ಅವರುಪರಮಪ್ರಸಾದದ ಆರಾಧನೆ ನಡೆಸಿದರು. ಬಳಿಕ ಮಂಗ ಳೂರು ಬಿಷಪ್ ಅ।ವಂ। ಡಾ। ಪೀಟರ್ ಪಾವ್ ಸಲ್ವಾನ್ನಾ ಅವರು ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿದರು.
ಬಲಿಪೂಜೆಯ ಬಳಿಕ ಶಿಲುಬೆಯ ಹಾದಿ ನಡೆಯಿತು. 12ನೇ ಸ್ಥಳದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜ ನಿಕಸಂಪರ್ಕಾಧಿಕಾರಿ ಮ ಡೆನಿಸ್ ಡೇಸಾ ಪ್ರಬೋಧನೆನೀಡಿದರು. 13ನೇಸ್ಥಳದಲ್ಲಿ ಯೇಸುವಿನ ಪಾರ್ಥಿವ ಶರೀರದ ದರ್ಶನ ಮತ್ತು ಪವಿತ್ರ ಶಿಲುಬೆಗೆ ನಮನ ಸಲ್ಲಿಕೆ ನಡೆಯಿತು. ಹಲು ಮಂದಿ ಕ್ರೈಸ್ತರು ಭಾಗವಹಿಸಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂಡಾ। ಜೆ.ಬಿ. ಸಲ್ಮಾನ್ಯಾ ಪೆಜಾರು ವಲಯದ ಪ್ರಧಾನ ಧರ್ಮಗುರು ವಂ| ರುಡಾಲ್ಫ್ ರವಿ ಡೇಸಾ, ವಾಮಂಜೂರು ಚರ್ಚ್ನ ಧರ್ಮಗುರು ವಂ। ಜೇಮ್ಸ್ ಡಿ'ಸೋಜಾ, ಕೆನರಾ ಕಮ್ಯೂನಿಕೇಶನ್ ನಿರ್ದೇಶಕ ವಂ| ಅನಿಲ್ ಫೆರ್ನಾಂಡಿಸ್, ತೋಕೂರು ಚರ್ಚ್ ಧರ್ಮಗುರು ವಂ। ಅನಿಲ್ ಡಿಸೋಜಾ, ವಲಯ ಪ್ರತಿನಿಧಿ ಪ್ರಮಿಳಾ ಪೆರಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ಅನಿಲ್ ಪೆರಿಸ್, ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್, ಮಾಧ್ಯಮ ಸಲಹೆಗಾರ ಎಲಿಯಾಸ್ ಫರ್ನಾಂಡಿಸ್, ಪ್ರಮುಖರಾದ ವಾಲ್ಟರ್ ಮೊಂತೇರೊ, ಆಲ್ವಿನ್ ಡಿ'ಸೋಜಾ ಇದ್ದರು. ವಂ। ವಿಜಯ್ ಮಚಾದೊ ಕಾರ್ಯಕ್ರಮ ನಿರ್ವಹಿಸಿದರು.