ಸುಳ್ಯ, ಮೇ.01(DaijiworldNews/TA): ಸುರಿದ ಭಾರೀ ಗಾಳಿ ಮಳೆಗೆ ತಾಲೂಕಿನ ತೊಡಿಕಾನ ಗ್ರಾಮದ ಬೊಳ್ಳುರು ಪದ್ಮಯ್ಯ ಗೌಡರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.


ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯ ಹಂಚು ಮುರಿದು ಬಿದ್ದಿದೆ.ಎಂದು ತಿಳಿದು ಬಂದಿದೆ. ಮನೆಯೊಳಗೆ ನೀರು ಬಂದಿದ್ದು, ಇದರಿಂದ ಮನೆಯೊಳಗೆ ಇದ್ದ ವಸ್ತುಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಲಾಗಿದೆ.