ಮಂಗಳೂರು, ಮೇ. 07 (DaijiworldNews/AK): ಮಾದಕ ವ್ಯವಸನವು ಯುವಜನತೆಯನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದು, ಇದರ ವಿರುದ್ಧ ಪ್ರತಿಯೊಂದು ಜಮಾಅತ್ನಲ್ಲೂ ಜಾಗೃತಿ ಮೂಡಿಸಿ ಪ್ರತಿಜ್ಞೆ ಕೈಗೊಳ್ಳಬೇಕಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಬಿ. ಲತೀಫ್ ಹೇಳಿದ್ದಾರೆ.









ಅವರು ಮೂಡುಶೆಡ್ಡೆಯ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದ್ರಸದ ವಠಾರದಲ್ಲಿ ನಡೆದ 21ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಯುವಜನತೆ ಇದಕ್ಕೆ ಬಲಿಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಒಂದು ದಿನ ಯುವಜನತೆಯೇ ಸಮಾಜದ ಮುಖ್ಯ ವಾಹಿನಿಯಿಂದ ಇಲ್ಲವಾಗಬಹುದು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸ್ವಲಾತ್ ವಾರ್ಷಿಕೋತ್ಸವದ ನೇತೃತ್ವವನ್ನು ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಅಲ್ ಬುಖಾರಿ ಆನೆಕಲ್ಲ್ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷ ಮೈಯ್ಯದ್ದಿ ವಹಿಸಿದ್ದರು.
ಬಿಎಚ್ಎಂ ಫ್ರೂಟ್ಸ್ ಗ್ಲೋಬಲ್ ಮಾರ್ಕೆಟ್ ಕಲ್ಲಾಪು ಇದರ ಮಾಲಕರಾದ ಎಂ. ಅಶ್ರಫ್, ಫರಂಗಿಪೇಟೆ ಅಲಂಗಾರ್ ಬೀಡಿ ಮಾಲಕ ಯೂಸುಫ್ ಹಾಜಿ ಪುತ್ರ ಮಹಮ್ಮದ್ ಫೈಝಲ್, ಎ.ಕೆ. ಓಲ್ಡ್ ಸ್ಕ್ರಾಪ್ ಮಾಲಕ ಹಾಜಿ ಮುಹಮ್ಮದ್ ಹನೀಫ್, ಎಸ್ಪಿಟಿ ಕನ್ಸ್ಟ್ರಕ್ಸನ್ ಮಾಲಕ ಹುಸೈನ್ ತೋಡಾರ್, ಎಂಎಚ್ ಕನ್ಸ್ಟ್ರಕ್ಸನ್ ಮಾಲಕ ಹಸನಬ್ಬ ಬಜಪೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಆಲಿಯಬ್ಬ, ನ್ಯಾಯವಾದಿ ಅಬ್ದುಲ್ ನಝೀರ್, ಎಆರ್ ಕನ್ಸ್ಟ್ರಕ್ಸನ್ಸ್ ಮಾಲಕ ಅಬ್ದುಲ್ ರಝಾಕ್, ಯುವ ಉದ್ಯಮಿ ಖಾಲೀದ್, ಮತ್ತಿತರರನ್ನು ಸನ್ಮಾನಿಸಲಾಯಿತು.
ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸದಸ್ಯ ಸಾಜುದ್ದೀನ್, ಮೂಡುಶೆಡ್ಡೆ ಹಿದಾಯುತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಬದ್ರಿಯಾ ಯಂಗ್ ಮೆನ್ಸ್ ಉಪಾಧ್ಯಕ್ಷ ಮಹಮ್ಮದ್ ಅನೀಸ್, ಇಸ್ಲಾಮಿಕ್ ಸೋಶಿಯಲ್ ಗ್ರೂಪ್ ಅಧ್ಯಕ್ಷ ಅಶ್ರಫ್ ಕೆತ್ತಿಕಲ್, ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್, ಉಪಾಧ್ಯಕ್ಷ ಮನ್ಸೂರ್, ಕೋಶಾಧಿಕಾರಿ ಮುಸ್ತಫಾ ಎ.ಕೆ.ಎಂ, ಪ್ರಧಾನ ಅಧ್ಯಾಪಕರಾದ ಝುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಹಿರಿಯರಾದ ಹಾಜಿ ಹನೀಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.