ಪುತ್ತೂರು, ಮೇ. 17 (DaijiworldNews/TA): ಅಪಘಾತದಲ್ಲಿ ಮರಣ ಹೊಂದಿದ ಅರುಣ್ ಬೋರುಗುಡ್ಡೆಯವರ ಮನೆಗೆ ಬಂಟ್ವಾಳ ತಾಲೂಕಿನ ಶಾಸಕರಾದ ರಾಜೇಶ್ ನಾಯ್ಕ್ ಉಲಿಪ್ಪಾಡಿಗುತ್ತು ಭೇಟಿ ನೀಡಿದ್ದಾರೆ.





ಕಬಕದಲ್ಲಿ ಇತ್ತೀಚೆಗೆ ಸರಕಾರಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಜೀವವೊಂದು ಬಲಿಯಾದ ಘಟನೆ ನಡೆದಿತ್ತು. ಬಸ್ ಅಪಘಾತದಲ್ಲಿ ಅರುಣ್ ಬೋರುಗುಡ್ಡೆ ಎಂಬವರು ನಿಧನರಾಗಿದ್ದರು. ಮೃತರ ಪತ್ನಿ ಹಾಗೂ ತಾಯಿ ಮತ್ತು ಮಗನ್ನು ಅಗಲಿದ್ದರು. ಈ ಅಪಘಾತಕ್ಕೆ ಬಸ್ ಚಾಲಕನ ಬೇಜವಬ್ದಾರಿ ಕಾರಣ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದರು.
ಇಂದು ದಿವಂಗತ ಅರುಣ್ ಬೋರುಗುಡ್ಡೆಯವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಲಿಪ್ಪಾಡಿಗುತ್ತು ಭೇಟಿ ನೀಡಿ ಮೃತರ ಪತ್ನಿ ಹಾಗೂ ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರು ಅರುಣ್ ಬೋರುಗುಡ್ಡೆಯವರ ಮಗನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ತಾನು ಭರಿಸುವುದಾಗಿ ತಿಳಿಸಿದರು. ಮತ್ತು ಅಪಘಾತದಿಂದ ಸಿಗುವ ಪರಿಹಾರ ಹಣವನ್ನು ಆದಷ್ಟು ಬೇಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ತಿಳಿಸಿದರು ಎನ್ನಲಾಗಿದೆ.