ಮಂಗಳೂರು, ಮೇ. 19 (DaijiworldNews/AA): ದಾಯ್ಜಿವರ್ಲ್ಡ್ ಟಿವಿ ಹಾಗೂ ಪುತ್ತೂರಿನ ಶ್ರೀ ದೇವಿ ನೃತ್ಯಾರಾಧನಾ ಕೇಂದ್ರದ ಸಹಯೋಗದಲ್ಲಿ ಹೊಚ್ಚ ಹೊಸ ರಿಯಾಲಿಟಿ ಶೋ ಪ್ರಾರಂಭಿಸಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಭರತನಾಟ್ಯ ಎಂಬ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಸಂಪೂರ್ಣವಾಗಿ ಮೀಸಲಾಗಿರುವ ರಿಯಾಲಿಟಿ ಶೋ ಪ್ರಸಾರವಾಗಲಿದೆ.

ಈ ವಿಶಿಷ್ಟ ರಿಯಾಲಿಟಿ ಶೋ ಭರತನಾಟ್ಯದ ಶ್ರೀಮಂತಿಕೆ ಮತ್ತು ಪರಂಪರೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ ನೃತ್ಯಗಾರರಿಗೆ ಮಾಧ್ಯಮ ವೇದಿಕೆಯಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಭರತನಾಟ್ಯದಲ್ಲಿ ಹಿರಿಯ ದರ್ಜೆಯನ್ನು ಪೂರ್ಣಗೊಳಿಸಿದವರಿಗೆ ಭಾಗವಹಿಸಲು ಈ ಸ್ಪರ್ಧೆ ಅವಕಾಶ ಕಲ್ಪಿಸುತ್ತದೆ. ಆಕಾಂಕ್ಷಿ ಸ್ಪರ್ಧಿಗಳು 14 ರಿಂದ 30 ವರ್ಷದೊಳಗಿನವರಾಗಿರಬೇಕು ಮತ್ತು ಪುರುಷ ಮತ್ತು ಮಹಿಳಾ ನೃತ್ಯಗಾರರು ಇಬ್ಬರೂ ಅರ್ಜಿ ಸಲ್ಲಿಸಬಹುದು.
ಜೂನ್ ತಿಂಗಳಲ್ಲಿ ಮಂಗಳೂರಿನಲ್ಲಿ ಕಾರ್ಯಕ್ರಮದ ಆಡಿಷನ್ ಪ್ರಕ್ರಿಯೆ ನಡೆಯಲಿದ್ದು, ಈ ಬಗ್ಗೆ ದಿನಾಂಕ ಹಾಗೂ ಸ್ಥಳದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಭರತನಾಟ್ಯದ ಶ್ರೇಷ್ಠ ಮತ್ತು ಪ್ರಸಿದ್ಧ ವ್ಯಕ್ತಿಗಳ ಸಮಿತಿ ನೇತೃತ್ವದಲ್ಲಿ ಆಡಿಷನ್ ಮತ್ತು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದು ಕೇವಲ ಸ್ಪರ್ಧೆಯಲ್ಲ, ಭರತನಾಟ್ಯ ಪ್ರತಿನಿಧಿಸುವ ಸಂಸ್ಕೃತಿ, ಶಿಸ್ತು ಮತ್ತು ಸಮರ್ಪಣೆಯ ಆಚರಣೆಯಾಗಿದೆ. ಈ ಕಾರ್ಯಕ್ರಮವು ಶಾಸ್ತ್ರೀಯ ಕಲೆಗಳನ್ನು ದೂರದರ್ಶನ ಪ್ರೇಕ್ಷಕರಿಗೆ ಹತ್ತಿರ ತರುವ ಮತ್ತು ಹೊಸ ಪೀಳಿಗೆಯ ನೃತ್ಯಗಾರರು ಮತ್ತು ಕಲಾ ಆಸಕ್ತರಿಗೆ ಸ್ಫೂರ್ತಿ ನೀಡುತ್ತದೆ.
ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆಡಿಷನ್ಗಾಗಿ ನೋಂದಾಯಿಸಿಕೊಳ್ಳಬಹುದು:
https://forms.gle/NGAG9PFwYMNAze619
ಗೂಗಲ್ ಫಾರ್ಮ್ನಲ್ಲಿ ನೋಂದಾಯಿಸಲು ಕೊನೆಯ ದಿನಾಂಕ: 31-ಮೇ-2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980312122, 6366226489
ಹೆಚ್ಚಿನ ವಿವರಗಳು ಮತ್ತು ನವೀಕರಣಗಳಿಗಾಗಿ ದೈಜಿವರ್ಲ್ಡ್ ಟಿವಿ 24x7 ವೀಕ್ಷಿಸಿ.