ಮಂಗಳೂರು, ಮೇ. 19 (DaijiworldNews/AK): ಕುಡ್ಲೋತ್ಸವದಲ್ಲಿ ರಿಕ್ಷಾ ಚಾಲಕರ ಒಕ್ಕೂಟ ಆಯೋಗದ ಮಂಗಳೂರು ಸಹಯೋಗದೊಂದಿಗೆ ನಗರದಾದ್ಯಂತ 720 ಕ್ಕೂ ಹೆಚ್ಚು ರಿಕ್ಷಾ ಚಾಲಕರನ್ನು ಒಟ್ಟುಗೂಡಿಸುವ ಮೊದಲ ಆಟೋ ಚಾಲಕರ ಕ್ರಿಕೆಟ್ ಪಂದ್ಯಾವಳಿ ನಗರದ ಪ್ರತಿಷ್ಠಿತ ೪ ಮೈದಾನದಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ನೆರವೇರಿತು.
















ಕ್ರಿಕೆಟ್ ಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳೂರಿನ ನೆಹರೂ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.
ನೆಹರು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕುಡ್ಲ ಚೀತಾಸ್ ವಿನ್ನರ್ ಹಾಗೂ ಕುಡ್ಲ ಡ್ರಾಗನ್ಸ್ ರನ್ನರ್ ಅಪ್ ಪಡೆದರು. ಎಮ್ಮೆಕೆರೆ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕುಡ್ಲ ಚೀತಾಸ್ ವಿನ್ನರ್ಸ್ ಹಾಗೂ, ಕುಡ್ಲ ಈಗಲ್ಸ್ ರನ್ನರ್ ಅಪ್, ಪದುವಾ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕುಡ್ಲ ಲಯನ್ಸ್ ವಿನ್ನರ್ಸ್ , ಕುಡ್ಲ ಟೈಗರ್ಸ್ ರನ್ನರ್ ಅಪ್ , ಕದ್ರಿ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕುಡ್ಲ ಬುಲ್ಸ್ ವಿನ್ನರ್ಸ್ , ಕುಡ್ಲ ಫೋನಿಕ್ಸ್ ರನ್ನರ್ ಅಪ್ ಆಗಿ ಸ್ಥಾನ ಪಡೆದರು.
ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತಾ, ವೆನ್ಸಿಟಾ ಡಯಾಸ್ ಅವರ ವೆನ್ಸ್ ಮಾಡಲಿಂಗ್ ಅಕಾಡೆಮಿ ತಂಡದಿಂದ ಪ್ಯಾಷನ್ ಶೋ, ಸಿಜ್ಲಿಂಗ್ ಗೈಸ್ ಡಾನ್ಸ್ ಕ್ರೂ ತಂಡದಿಂದ ನೃತ್ಯ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಖ್ಯಾತ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, ಕುಡ್ಲೋತ್ಸವದ ರೂವಾರಿ ಆನಂದ್ ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಎನೆಪೋಯ ಗ್ರೂಪ್ ನ ಜಾವೇದ್, ಎನ್ ಆರ್ ಐ ಉದ್ಯಮಿ ಅಬ್ದುಲ್ ರಝಾಕ್ , ಮಾಜಿ ಸಚಿವ ರಮಾನಾಥ ರೈ, ವಿಧಾನ ಸಭೆ ಸ್ಪೀಕರ್ ಯು.ಟಿ ಖಾದರ್ ಇತರ ಗಣ್ಯರು ಉಪಸ್ಥಿತರಿದ್ದರು.