ಸುಳ್ಯ, ಮೇ.20 (DaijiworldNews/TA): ಪರಿವಾರ ಕಾನದ ಬಳಿ ಮುಖ್ಯರಸ್ತೆಗೆ ಮಳೆ ನೀರು ನದಿಯಂತೆ ಹರಿದು ಬರುತ್ತಿದ್ದು ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.

ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ಮೇಲ್ಬಾಗದಿಂದ ಹರಿದು ಬರುವ ಮಳೆಯ ನೀರು ರಸ್ತೆ ತುಂಬಾ ಹರಿದಾಡುತ್ತಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಯಾವುದು ಚರಂಡಿ ಯಾವುದು ಎಂಬುದು ಗೊತ್ತಾಗದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ವಾಹನ ಸವಾರರು ದೂರಿದ್ದಾರೆ.