ಮಂಗಳೂರು, ಮೇ. 23 (DaijiworldNews/AK): ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ಸಾಗುವ ಬೃಹತ್ ಗಾತ್ರದ ಮೈನ್ಸ್ ಲಾರಿಗಳ ವಿರುದ್ದ ಕಿನ್ನಿಗೋಳಿ ನಿಡ್ಡೋಡಿಯ ಬಂಗೇರಪದವಿನಲ್ಲಿ ಶುಕ್ರವಾರ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.


ತೆಂಕಮಿಜಾರು ವ್ಯಾಪ್ತಿಯಲ್ಲಿ ಅದಿರು ಗಣಿಗಾರಿಕೆ ನಡೆಯುತ್ತಿದ್ದು, ಅಲ್ಲಿಂದ ಕಲ್ಲಮುಂಡ್ಕೂರು ವ್ಯಾಪ್ತಿಯ ಬಂಗೇರ ಪದವು ಕೊಲತರು ಪದವು ಮೂಲಕ ಬಂದು ಮೂಡಬಿದ್ರೆ ಮೂಲಕ ಸಾಗುತ್ತಿದ್ದು ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಈಶ್ವರ್ ಕಟೀಲ್ ಮಾತನಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತೆಂಕ ಮಿಜಾರಿನಲ್ಲಿ ನಡೆಯುವ ಗಣಿಗಾರಿಕೆಯ ಮೈನ್ಸ್ ನ್ನು ವಾಹನ ಪರವಾನಿಗೆ ಇಲ್ಲದೆ ಬಂಗೇರಪದವು ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾರೆ, ಮಾತ್ರವಲ್ಲದೆ ಮೈನ್ಸ್ ಗೆ ಹೋಗುವ ದಾರಿಯಲ್ಲಿ ಎಸ್.ಟಿ.ಎಸ್.ಸಿನವರ ಜಾಗವಿದ್ದು ಅದರಲ್ಲಿ ಬಹೃತ್ ಗಾತ್ರದ ಘನ ವಾಹನಗಳು ಕೂಡ ಸಂಚರಿಸಿದೆ.
ಅಧಿಕ ಭಾರದ 22 ಚಕ್ರದ ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತಿದ್ದು, ದಿನವೊಂದಕ್ಕೆ 90ಕ್ಕಿಂತ ಅಧಿಕ ಲೋಡ್ ಅದಿರು ಸಾಗಟ ನಡೆಸುತ್ತಿದ್ದು, ಈ ಕಾರಣ ರಸ್ತೆ ಸಂಪೂರ್ಣವಾಗಿ ಹದಗೆಡುತ್ತದೆ, ಈ ಬಗ್ಗೆ ಈ ಹಿಂದೆಯೇ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು, ಈ ರಸ್ತೆಯ ಮೂಲಕ ಸಾಗಟ ನಡೆಸಬಾರದೆಂದು ಇಲಾಖೆ ಮಾಹಿತಿ ನೀಡಿದರು. ಅಕ್ರಮವಾಗಿ ರಾತ್ರಿ ಹಗಲೆನ್ನದೆ ಸಂಚರಿಸುತ್ತಿದೆ, ಇದರಿಂದ ಸ್ಥಳೀಯರಿಗೆ ತುಂಬಾ ತೊಂದೆಯಾಗುವುದು ಮಾತ್ರವಲ್ಲದೆ ಅಧಿಕ ಸಾಮಾರ್ಥ್ಯದ ಲಾರಿಗಳ ಓಡಾಟದಿಂದ ಶ್ರೀಘ್ರದಲ್ಲೇ ರಸ್ತೆ ಹದಗೆಡಲಿದೆ ಎಂದರು.
ಪಂಚಾಯತ್ ಮಾಜಿ ಸದಸ್ಯ ರಾಮ ಗೌಡ ಮಾತನಾಡಿ, ಬೃಹತ್ ಘನ ಗಾತ್ರದ ಲಾರಿಗಳು ಬೇರೆ ವಾಹನಗಳಿಗೆ ದಾರಿ ಬಿಡದೆ ಓಡಾಟ ನಡೆಸುತ್ತಿದೆ, ಇದರಿಂದ ಲಘು ಗಾತ್ರದ ವಾಹನಗಳಿಗೆ ತೊಂದರೆಯಾಗುತ್ತಿದೆ. ಎರಡು ದಿನದ ಹಿಂದೆ ಕಲ್ಲಮುಂಡ್ಕೂರ್ ನಲ್ಲಿರುವ ಮುಚ್ಚೂರು ದೇವಳದ ದ್ವಾರಕ್ಕೆ ಈ ಅಕ್ರಮದ ಓಡಾಟದ ಲಾರಿ ಡಿಕ್ಕಿ ಹೊಡೆದು ಹಾನಿಗೊಳಿಸಿದೆ. ಅಲ್ಲದೆ ದಾರಿ ಬಿಡಲು ಹೋದ ಲಾರಿಗಳಿಂದ ಅಪಘಾತ ಕೂಡ ನಡೆಯುತ್ತಿದೆ ಎಂದರು.
ಕಲ್ಲಮುಂಡ್ಕೂರು ಪಂಚಾಯತ್ ಸದಸ್ಯ ಕೇಶವ ಸಂಗಮ್ ಮಾತನಾಡಿ, ಈ ಗಣಿಗಾರಿ ಕಲ್ಲಮುಂಡ್ಕೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ, ತೆಂಕಮಿಜಾರಿನಲ್ಲಿ ನಡೆಯುವ ಗಣಿಗಾರಿಗೆ ಆದರೆ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿ ಮೂಲಕ ಲಾರಿಗಳ ಅಕ್ರಮ ಓಡಾಟದಿಂದ ನಾವು ಇದನ್ನು ವಿರೋಧಿಸುತ್ತೇವೆ, ಅಧಿಕಾರಿಗಳ ಸೂಚನೆ ಇದ್ದರೂ ಅಕ್ರಮವಾಗಿ ಓಡಾಟ ನಡೆಸುತ್ತಿದೆ . ಪ್ರತಿಭಟನೆ ನಮಗೆ ಹೊಸತಲ್ಲ ಈ ಹಿಂದೆ ನಿಡೋಡಿಗೆ ಉಷ್ಣ ವಿದ್ಯುತ್ ಸ್ಥಾವರ ಬರಲು ಯತ್ನಿಸಿದಾಗ ಪ್ರತಿಭಟನೆ ನಡೆಸಿ ದೇಶ ಮಟ್ಟದಲ್ಲಿ ಪ್ರಚಾರವಾಗಿದೆ, ಈ ಲಾರಿಗಳ ಓಡಾಟ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಕಲ್ಲಮುಂಡ್ಕೂರು ಪಂಚಾಯತ್ ಅಧ್ಯಕ್ಷ ಸುಂದರ ಪೂಜಾರಿ ಮಾತನಾಡಿ, ಸರಕಾರದ ಅನುದಾನದಿಂದ ಈ ರಸ್ತೆಯನ್ನು ಅಭಿವೃದ್ದಿ ಮಾಡಲಾಗಿದೆ, ಅಕ್ರಮ ಓಡಾಟದ ಬಗ್ಗೆ ಅಧಿಕಾರಿಗಳ ಸೂಚನೆ ಇದೆ, ಈ ಕಾರಣ ದಿಂದ ಪೋಲೀಸರು ಈ ಬಗ್ಗೆ ಗಮನ ಹರಿಸಿ ಅಕ್ರಮವನ್ನು ನಿಲ್ಲಿಸಬೇಕು, ಯಾವ ಗ್ರಾಮದಲ್ಲಿ ಗಣಿಗಾರಿಕೆ ನಡೆಯುತ್ತಿದೆಯೋ ಅದೇ ಗ್ರಾಮದ ರಸ್ತೆಯಲ್ಲಿ ಈ ಲಾರಿಗಳು ಓಡಾಟ ನಡೆಸಲಿ.
ಈ ಪ್ರತಿಭಟನೆ ಪ್ರಾರಂಭ ಮಾತ್ರ ಈ ಅಕ್ರಮ ನಿಲ್ಲುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದರು.
ಈ ಸಂದರ್ಭ ಕಂದಾಯ ನಿರೀಕ್ಷಕ ಮಂಜುನಾಥ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಶಾಂತ್ ಶೆಟ್ಟಿ, ಮೂಡಬಿದ್ರೆ ಪೋಲೀಸ್ ಇನ್ಪೇಕ್ಟರ್ ಸಂದೇಶ್ ಇವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸತೀಶ್ ಕಲ್ಲಮುಂಡ್ಕೂರು, ಸುಧಾಕರ ಪೂಜಾರಿ ಮೇಲ್ದಬೆಟ್ಟು ಪ್ರತಿಭಟನೆಯಲ್ಲಿಮಾತನಾಡಿದರು. ಈ ಸಂದರ್ಭ ಕಲ್ಲಮುಂಡ್ಕೂರು ಪಂಚಾಯತ್ ಅಧ್ಯಕ್ಷೆ ಪ್ರೇಮ ಶೆಟ್ಟಿ, ಸದಸ್ಯರಾದ ಜನಾರ್ದನ ಗೌಡ, ಗಿರೀಶ್ ಪೂಜಾರಿ ವಸಂತ ನಾಯಕ್, ಕಲ್ಯಾಣಿ, ಲೀಲಾ, ಸಂತೋಷ್ ಪಡೀಲ್, ವಿನೇಶ್ ಪೂಜಾರಿ, ನಿಡ್ಡೋಡಿ, ವಿಕ್ಕಿ, ಯಶವಂತ ಶೆಟ್ಟಿ, ರಿಕ್ಷಾ ಯೂನೀಯನ್ ಸದಸ್ಯರು, ಸಮಾಜ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು