ಮಂಗಳೂರು, ಮೇ. 24 (DaijiworldNews/AA): ಮಂಗಳೂರಿನ ಎಕ್ಸ್ಪರ್ಟ್ ಕಾಲೇಜು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಹಲವು ಉನ್ನತ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿವಿಧ ವಿಭಾಗಗಳಲ್ಲಿ ಟಾಪ್ 10 ರ್ಯಾಂಕ್ ಗಳಲ್ಲಿ, ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು 12 ರ್ಯಾಂಕ್ ಗಳನ್ನು ಪಡೆದಿದ್ದಾರೆ ಎಂದು ಎಕ್ಸ್ ಪರ್ಟ್ ಸಂಸ್ಥೆಯ ಚೇರ್ ಮ್ಯಾನ್ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಬಿ.ಎಸ್ ಸಿ ಅಗ್ರಿಕಲ್ಚರ್ ವಿಭಾಗದಲ್ಲಿ, ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ಟಾಪ್ 10 ರಲ್ಲಿ 7 ರ್ಯಾಂಕ್ ಗಳನ್ನು ಪಡೆದಿದ್ದಾರೆ. ಸಾಯೀಶ್ ಶ್ರವಣ್ ಪಂಡಿತ್ 2ನೇ ರ್ಯಾಂಕ್, ಸುಚೀತ್ ಪ್ರಸಾದ್ 3ನೇ ರ್ಯಾಂಕ್, ಮತ್ತು ಶ್ರೇಯಾ 5ನೇ ರ್ಯಾಂಕ್, ಸಿದ್ದೇಶ್ ಬಿ ದಮ್ಮಾಳಿ 7ನೇ ರ್ಯಾಂಕ್, ನಿಖಿಲ್ ಸೋನಾರ್ 8ನೇ ರ್ಯಾಂಕ್, ಮೊಹಮ್ಮದ್ ರಿಹಾನ್ 9ನೇ ರ್ಯಾಂಕ್, ಮತ್ತು ವಚನ್ ಎಲ್ ಎ 10ನೇ ರ್ಯಾಂಕ್ ಪಡೆದಿದ್ದಾರೆ.
ಸಫಲ್ ಎಸ್ ಶೆಟ್ಟಿಗೆ ಬಿಎನ್ವೈಎಸ್ ನಲ್ಲಿ 3ನೇ ರ್ಯಾಂಕ್, ವೆಟರ್ನರಿ ಸೈನ್ಸ್ ವಿಭಾಗದಲ್ಲಿ 3ನೇ ರ್ಯಾಂಕ್, ಬಿ-ಫಾರ್ಮ್ ನಲ್ಲಿ 8ನೇ ರ್ಯಾಂಕ್, ಡಿ-ಫಾರ್ಮ್ ನಲ್ಲಿ 8ನೇ ರ್ಯಾಂಕ್, ಮತ್ತು ಬಿ.ಎಸ್ಸಿ ನರ್ಸಿಂಗ್ ವಿಭಾಗದಲ್ಲಿ 3ನೇ ರ್ಯಾಂಕ್ ಗಳಿಸಿದ್ದಾರೆ.
ಇನ್ನು ಶ್ರೇಯಸ್ ಎಸ್ ಪಾಟೀಲ್ ಮತ್ತು ವಚನ್ ಎಲ್ ಎ ತಮ್ಮ ಶ್ಲಾಘನೀಯ ಕಾರ್ಯಕ್ಷಮತೆಯ ಮೂಲಕ ಸಂಸ್ಥೆಗೆ ಗೌರವ ತಂದಿದ್ದಾರೆ.
ಸಿಇಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಕ್ಸ್ಪರ್ಟ್ ಕಾಲೇಜಿನ ಆಡಳಿತ ಮಂಡಳಿಯು ಅಭಿನಂದಿಸಿತು. ವಿದ್ಯಾರ್ಥಿಗಳು ಯಶಸ್ಸಿಗೆ ಕೇಂದ್ರೀಕೃತ ತರಬೇತಿ ಮತ್ತು ಅನುಕೂಲಕರ ಕಲಿಕಾ ವಾತಾವರಣವನ್ನು ಒದಗಿಸಿದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಶೈಕ್ಷಣಿಕ ಮಾರ್ಗದರ್ಶಕರ ಸಾಮೂಹಿಕ ಪ್ರಯತ್ನಗಳು ಕಾರಣವಾಗಿದೆ.