ಮಂಗಳೂರು, ಮೇ. 30 (DaijiworldNews/TA): ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮನೆಯೊಳಗೆ ನೀರು ನುಗ್ಗಿದ ಘಟನೆ ತೊಕ್ಕೊಟ್ಟು ಕಲ್ಲಾಪು ಬಳಿ ನಡೆದಿದೆ.


ಕ್ಯಾರಲ್ ಕರೀಷ್ಮಾ ಎಂಬವರಿಗೆ ಸೇರಿದ ಮನೆಗೆ ಇದಾಗಿದ್ದು, ಅಕ್ಕಪಕ್ಕದಲ್ಲಿರುವ ನಾಲ್ಕೈದು ಮನೆಗಳಿಗೂ ನೀರು ನುಗ್ಗಿದೆ. ಕಾಲುವೆಯ ಮೇಲೆ ಕಟ್ಟಡ ಕಟ್ಟಿರುವುದು ಘಟನೆಗೆ ಕಾರಣ ಎಂಬುವುದು ಸ್ಥಳೀಯರ ಆರೋಪವಾಗಿದೆ.
ಈ ಬಗ್ಗೆ ಮಳೆ ಆರಂಭಕ್ಕೂ ಮುನ್ನವೇ ಗ್ರಾಂ.ಪಂ ಗೆ ದೂರನ್ನ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಈವರೆಗೆ ಪಂಚಾಯತ್ ನವರು ಸೂಕ್ತ ಕ್ರಮ ಕೈಗೊಂಡಿಲ್ಲ.