ಕಾಸರಗೋಡು, ಮೇ. 31 (DaijiworldNews/TA): ಪ್ರವಾಹಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಧೂರು ಪಟ್ಲ ಮೊಗರ್ ಎಂಬಲ್ಲಿ ನಡೆದಿದೆ. ಪಾಲಕುನ್ನು ಕರಿಪ್ಪೊಡಿಯ ಸಾದಿಕ್ ( ೩೯) ಮೃತಪಟ್ಟವರು. ಪತ್ನಿ ಮನೆಗೆ ಬಂದಿದ್ದ ಇವರು ಸಮೀಪದ ಸಂಬಂಧಿಕರೋರ್ವರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಹಕ್ಕೆ ಸಿಲುಕಿ ನೀರುಪಾಗಿದ್ದು , ಜೊತೆಗಿದ್ದ ಪತ್ನಿಯ ಸಹೋದರ ಮೊಯ್ದು ಅಪಾಯದಿಂದ ಪಾರಾಗಿದ್ದಾರೆ.

ಬೆಳಿಗ್ಗೆ ಮಧೂರು ಪಟ್ಲ ಮೊಗರ್ ಎಂಬಲ್ಲಿ ಘಟನೆ ನಡೆದಿದೆ. ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ . ಅಗ್ನಿಶಾಮಕ ದಳದ ಸಿಬಂದಿ, ಸ್ಥಳೀಯರು ಶೋಧ ನಡೆಸಿ ಘಟನೆ ನಡೆದ ಅಲ್ಪ ದೂರದಿಂದ ಮೃತದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.