ಮಂಗಳೂರು, ಜೂ. 01 (DaijiworldNews/TA): ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಗಳೂರು ಬಜಾಲ್ ವೀರನಗರದಲ್ಲಿ ಮನೆಯೊಂದು ಕುಸಿತ ಭೀತಿಯಲ್ಲಿದ್ದು, ಮನೆಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಸುರಿದ ಮಳೆಗೆ ಮನೆ ಸಮೀಪದ ಗುಡ್ಡ ಕುಸಿತಗೊಂಡಿದ್ದು ಆತಂಕದಲ್ಲೇ ಕುಟುಂಬ ಜೀವನ ನಡೆಸುವಂತಾಗಿದೆ. ಈಗಾಗಲೇ ಕುಸಿತ ಪ್ರದೇಶಕ್ಕೆ ಸ್ಥಳೀಯ ಕಾರ್ಪೋರೆಟರ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮನೆಯಲ್ಲಿ ಮಕ್ಕಳು ಕೂಡ ಇದ್ದು, ಆದಷ್ಟು ಬೇಗ ಪರಿಹಾರ ಕೊಡಬೇಕು ಎಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.