ಕಾರ್ಕಳ,ಜೂ. 01 (DaijiworldNews/AK): ಕಾರ್ಕಳ-ನಿಟ್ಟೆ ರಾಜ್ಯ ಹೆದ್ದಾರಿಯಲ್ಲಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಹಿಟ್ ಎಂಡ್ ರನ್ ಮಾಡಿದ ಟಿಪ್ಪರ್ವೊಂದನ್ನು ಅಜೆಕಾರು ಪೊಲೀಸರ ಸಹಕಾರದೊಂದಿಗೆ ಪತ್ತೆ ಹಚ್ಚಲಾಗಿದೆ.


ಈ ಬಗ್ಗೆ ಕುಂಟಲ್ಪಾಡಿಯ ವಂದನ ಜತ್ತನ್ನ ಎಂಬವರ ಕುರಿತು ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೇ 30ರಂದು ಸಂಜೆ ಸುಮಾರು 7.30ರ ವೇಳೆಗೆ ಕಾರ್ಕಳ ಪೇಟೆಯಿಂದ ಕುಂಟಲ್ಪಾಡಿಯಲ್ಲಿರುವ ತನ್ನ ಮನೆಗೆ ಕೆ.ಎ.20 ಎಂಎಫ್ 3478 ನೇ ನಂಬ್ರದ ಕಾರಿನಲ್ಲಿ ಹೋಗುತ್ತಿದ್ದಾಗ, ನಿಟ್ಟೆ ಕಡೆಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಟಿ ಎಸ್ 08 ಯುಇ 9098 ನಂಬರ್ನ ಟಿಪ್ಪರ್ ಪುಲ್ಕೇರಿ ಎಂಬಲ್ಲಿ ಡಿಕ್ಕಿ ಹೊಡೆದಿತ್ತು.
ಪರಿಣಾಮವಾಗಿ ಕಾರಿನ ಎದರುಗಡೆ ಜಖಂಗೊಂಡಿದ್ದು, ಅಪಘಾತದ ಕುರಿತು ನಿರ್ಲಕ್ಷ ವಹಿಸಿದ ಟಿಪ್ಪರ್ ಚಾಲಕ ಘಟನಾ ಸ್ಥಳದಲ್ಲಿ ವಾಹನ ನಿಲ್ಲಿಸದೇ ಕಾರ್ಕಳದ ಜೋಡುರಸ್ತೆಯಾಗಿ ಮುಂದೆ ಸಾಗಿಸಿದ್ದಾರೆ. ಆ ಕೂಡಲೇ ಕಾರ್ಕಳ ನಗರ ಠಾಣೆಗೆ ಕಾರಿನ ಮಾಲಕ ವಂದನ ಜತ್ತನ್ನ ಫೋನ್ ಕರೆ ಮೂಲಕ ದೂರು ಸಲ್ಲಿಸಿದ್ದರು.
ಟಿಪ್ಪರ್ ಅಜೆಕಾರು ನತ್ತ ಹೋಗುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ನಗರ ಠಾಣಾ ಪೊಲೀಸರು ಅಜೆಕಾರು ಪೊಲೀಸರಿಗೆ ಮಾಹಿತಿ ರವಾಯಿಸಿದ್ದರು. ಕೂಡಲೇ ನಾಕಾಬಂದಿ ಹಾಕುವ ಮೂಲಕ ಟಿಪ್ಪರ್ರನ್ನು ಅಜೆಕಾರು ಪೊಲೀಸರು ತಡೆದು ನಿಲ್ಲಿಸಿ ಕಾರ್ಕಳ ನಗರ ಪೊಲೀಸರಿಗೆ ಹಸ್ತಾಂತರಿಸಿದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.