ಮಂಗಳೂರು, ಜೂ.02 (DaijiworldNews/TA): ನಗರದ ಹೃದಯ ಭಾಗ ಕ್ಲಾಕ್ ಟವರ್ ಮುಂಭಾಗ ಪೊಲೀಸರು ಲಾಠಿ ಕವಾಯತು ನಡೆಸಿದರು.

ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚನೆಯಂತೆ ಕೆ ಎಸ್ ಆರ್ ಪಿ ತುಕುಡಿಯಿಂದ ಲಾಠಿ ಕವಾಯತು ನಡೆಸಲಾಗಿತ್ತು. ಮಂಗಳೂರು ನಗರದಲ್ಲಿ ಇತ್ತೀಚೆಗೆ ಉಂಟಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕವಾಯತು ಪ್ರದರ್ಶನ ನೀಡಲಾಯಿತು.