ಕಾಸರಗೋಡು, ಜೂ.02 (DaijiworldNews/TA): ನಗರದ ಹಳೆ ಬಸ್ ನಿಲ್ದಾಣ ಸಮೀಪದ ವಸ್ತ್ರ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಸೋಮವಾರ ನಡೆದಿದೆ.

ಹಳೆ ಬಸ್ ನಿಲ್ದಾಣ ಪರಿಸರದ ‘ಇಸ್ಡಾ ಫರ್ದಾಸ್’ ಮಳಿಗೆಯಲ್ಲಿ ಅನಾಹುತ ಸಂಭವಿಸಿದ್ದು, ಸುಮಾರು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕಾಸರಗೋಡು, ಕಾಞಿಂಗಾಡ್ , ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಫರ್ದಾ ಹಾಗೂ ಇನ್ನಿತರ ವಸ್ತ್ರಗಳು ಅಗ್ನಿಗಾಹುತಿಯಾಗಿವೆ.