ಉಡುಪಿ, ಜೂ.03 (DaijiworldNews/TA): ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿಯ ಸಂತೆಕಟ್ಟೆಗೆ ಆಗಮಿಸುವ ರಸ್ತೆಯಲ್ಲೇ ಹೊಂಡ ಗುಂಡಿಗಳಿದ್ದು ದಿನನಿತ್ಯ ಸಂಚರಿಸುವ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಇದೆ. ಕುಂದಾಪುರದಿಂದ ಉಡುಪಿಗೆ ಸಂಚರಿಸುವವರು ಈ ಹೊಂಡ ಗುಂಡಿಗಳನ್ನು ದಾಟಿ ಬರುವುದೇ ಒಂದು ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ದಿನನಿತ್ಯ ಸಂಚರಿಸುವ ವಾಹನ ಸವಾರರು ಚಲಾಯಿಸುವುದು ಬಹಳ ಕಷ್ಟ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮಧ್ಯ ಹೊಂಡ ಗುಂಡಿಗಳಿದ್ದು ಅದರಲ್ಲಿಯೇ ನೀರು ಕೂಡ ತುಂಬಿಕೊಂಡಿರುವ ಪರಿಣಾಮ ಹೊಂಡ ಯಾವುದು ಅಥವಾ ರಸ್ತೆ ಯಾವುದು ಎಂದು ತಿಳಿಯದೇ ವಾಹನ ಸವಾರರು ಪರದಾಡುತ್ತಿದ್ದಾರೆ.
ಈಗಾಗಲೇ ಇಲ್ಲಿ ದಿನನಿತ್ಯ ವಾಹನ ಸವಾರರು, ಶಾಲಾ ಬಸ್ ಗಳು, ಟ್ರಕ್ ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಬಹಳಷ್ಟು ತೊಂದರೆ ಕೂಡ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎಚ್ಚೆತ್ತುಕೊಂಡು ಸರಿಪಡಿಸಬೇಕು ಹಾಗೂ ಇಲ್ಲಿ ವಿಭಜಕ ಇರುವ ಕಾರಣ ಸರಿಯಾದ ಸೂಚನಾ ಫಲಕ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.