ಕಡಬ, ಜೂ. 04 (DaijiworldNews/AK):ಅರಣ್ಯ ಅಧಿಕಾರಿಗಳ ದಾಳಿ ನಡೆಸಿ ಅಕ್ರಮ ಮರ ದಿಮ್ಮಿಗಳು, ಲಾರಿ ಕ್ರೇನ್ ವಶಕ್ಕೆ ಪಡೆದ ಘಟನೆ ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ನಡೆದಿದೆ.

ಕೆ.ಎ.19ಎ.ಎ.7499 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿ, ಏಸ್ 11ಟನ್ ಮೊಬೈಲ್ ಕ್ರೇನ್, ಮಹಾಗಣಿ ಮರದ 7.508ಮೀಟರ್ ಉದ್ದದ 22 ದಿಮ್ಮಿಗಳು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಇನ್ನೂ ದಾಳಿ ಮುಂದುವರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.