ಕಾಸರಗೋಡು, ಜು. 16 (DaijiworldNews/AA): ಭಾರೀ ಮಳೆ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ (ಜು.17ರಂದು) ಕಾಸರಗೋಡು ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ಆದೇಶ ಹೊರಡಿಸಿದ್ದಾರೆ.

ಶಾಲಾ-ಕಾಲೇಜು, ವೃತ್ತಿಪರ ಕಾಲೇಜು, ಕೇಂದ್ರ ವಿದ್ಯಾಲಯ, ಟ್ಯೂಷನ್ ಕೇಂದ್ರಗಳು, ಮದರಸ, ಅಂಗನವಾಡಿ ಮೊದಲಾದವುಗಳಿಗೆ ಮೊದಲಾದವುಗಳಿಗೆ ರಜೆ ಅನ್ವಯವಾಗಲಿದೆ. ಪೂರ್ವನಿಗಧಿತ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.