ಬಂಟ್ವಾಳ, ಸೆ. 03 (DaijiworldNews/AK): ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಬೇಂಕ್ಯ ದ.ಕ ಜಿಲ್ಲಾ ಪಂಚಾಯರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವತ್ಸಲ ರವರು ಬೇಂಕ್ಯ ಶಾಲೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಇಂದು ನಿವೃತ್ತಿ ಹೊಂದಿದ್ದಾರೆ.


ಈ ನಿಟ್ಟಿನಲ್ಲಿ ಶಾಲೆಯಲ್ಲಿ ಇಂದು ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜ ,ಮಾಗಣೆ ತಂತ್ರಿಗಳಾದ ಎಮ್ ಸುಬ್ರಹ್ಮಣ್ಯ ಭಟ್ ಪಂಚಾಯತ್ ಸದಸ್ಯರಾದ ಯೋಗಿಶ್ ಬೇಳ್ಚಾಡ ಕೂಡೂರು,ಪಂಚಾಯತ್ ಸದಸ್ಯರಾದ ಸಿದ್ಧಿಕ್ ಕೊಳಕೆ,ಚಂದ್ರಶೇಕರ ಬೊಕ್ಕಸ ಹಾಗೂ ಶಾಲೆಯ ಶಿಕ್ಷಕಿಯರು ಹಾಗೂ ಸಹಾಯಕರು ಜೊತೆ ಸೇರಿ ಶ್ರೀಮತಿ ವತ್ಸಲ ರವರಿಗೆ ಅಭಿನಂದಿಸಿ ಗೌರವಿಸಿದರು.
ಈ ಶಾಲೆಗೆ ನೀವು ನೀಡಿದ ಸೇವೆ ಹಾಗೂ ಅಭಿವೃದ್ಧಿಗೆ ತೋರಿಸಿದ ಉತ್ಸಾಹವನ್ನು ಎಂದಿಗೂ ಮರೆಯುವಂತಿಲ್ಲ, ನಿಮ್ಮ ಮುಂದಿನ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಎಲ್ಲರೂ ಶುಭಹಾರೈಸಿದರು.