ಮಂಗಳೂರು, ಸೆ. 22 (DaijiworldNews/TA): ನಗರದ ನಂತೂರು-ಕೆಪಿಟಿ ಹೆದ್ದಾರಿಯಲ್ಲಿ ಸ್ಕೂಟರ್ ಗುಂಡಿಗೆ ಬಿದ್ದಿದ್ದು ಸವಾರ ಅದೃಷ್ಟವಶಾತ್ ಪಾರಾಗಿದ್ದಾರೆ.

ನಂತೂರು ಜಂಕ್ಷನ್ನಿಂದ ಕೆಪಿಟಿ ಕಡೆಗೆ ರಸ್ತೆಯ ಬಲ ಬದಿಯಲ್ಲಿ ಸಾಗುತ್ತಿದ್ದ ಸ್ಕೂಟರ್ನ ಚಕ್ರಗಳು ರಸ್ತೆಯಲ್ಲಿದ್ದ ಗುಂಡಿಗೆ ಇಳಿದಿದ್ದು, ಇದರಿಂದ ಸ್ಕೂಟರ್ ಏಕಾಏಕಿ ತಿರುಗಿ ನಿಂತಿದೆ. ಹಿಂದೆ ಯಾವುದೇ ವಾಹನಗಳು ಇಲ್ಲದಿದ್ದ ಕಾರಣ ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಜತೆಗೆ ಸವಾರನೂ ಚಾಕಚಕ್ಯತೆಯಿಂದ ಸ್ಕೂಟರ್ ರಸ್ತೆಗೆ ಬೀಳದಂತೆ ತಡೆದು ನಿಲ್ಲಿಸಿದ್ದಾರೆ. ಸ್ಕೂಟರ್ನ ಹಿಂದೆ ಮಹಿಳೆಯೊಬ್ಬರು ಕುಳಿತಿದ್ದರು. ಈ ದೃಶ್ಯ ಕಾರೊಂದರ ಡ್ಯಾಶ್ ಕೆಮರಾದಲ್ಲಿ ಸೆರೆಯಾಗಿದೆ.