ಕಾಪು, ಅ. 15 (DaijiworldNews/AA): "ದಿ.ಡಾ.ಎಸ್.ಎಲ್.ಭೈರಪ್ಪನವರ ಶ್ರೇಷ್ಠ ಕೃತಿಗಳು ಅನುಭವ ಜನ್ಯವಾದ ವಿಷಯಗಳಿಂದ ಕೂಡಿರುವುದು ಮಾತ್ರವಲ್ಲ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ವಿಷಯಾಧಾರಿತ ನಿರೂಪಣಾ ಶೈಲಿಯಿಂದ ಕೂಡಿರುವ ಕಾರಣದಿಂದಲೇ ಜನಮಾನಸದಲ್ಲಿ ಅಳಿಯುವುವಿಲ್ಲದೆ ಸದಾಕಾಲ ಜೀವಂತಾಗಿಯೇ ಓದುಗರನ್ನು ಸೆಳೆಯುತ್ತದೆ. ಹಾಗಾಗಿಯೇ ಅವರ ಮೇರು ಕೃತಿಗಳಾದ ಆವರಣ, ದಾಟು, ವಂಶವೃಕ್ಷ, ಸಾಕ್ಷಿ, ಪವ೯ ಮುಂತಾದ ಕೃತಿಗಳು ನಮ್ಮ ಬದುಕಿನ ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಂತೆ ಸದಾ ಜೀವಂತವಾಗಿ ನಿಲ್ಲುತ್ತದೆ" ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗ ನಿವೃತ್ತ ಮುಖ್ಯಸ್ಥರಾದ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಸಾಹಿತ್ಯ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಅಕ್ಟೋಬರ್ 14ರಂದು ಏರ್ಪಡಿಸಿದ್ದ ಡಾ.ಎಸ್.ಎಲ್.ಭೈರಪ್ಪ ನವರ ನುಡಿನಮನ ಕಾರ್ಯಕ್ರಮ ನಡೆಯಿತು.
"ಭಿನ್ನತೆಯನ್ನು ಒಪ್ಪಿಕೊಳ್ಳುತ್ತಿದ್ದ ಭೈರಪ್ಪನವರು ಪರ ವಿರೋಧಿಗಳ ಹೃದಯವನ್ನು ಗೆದ್ದ ಸಾಹಿತ್ಯ ಕ್ಷೇತ್ರದಲ್ಲಿ ಸಾಮ್ರಾಟರಾದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಡತನದಲ್ಲಿಯೇ ಬೆಂದು ಅರಳಿ ಬಂದ ಸ್ಪೂರ್ತಿಯ ಚಿಲುಮೆ ಅವರು. ಇಂದಿನ ಯುವ ಪೀಳಿಗೆಗೆ ಡಾ.ಭೈರಪ್ಪನವರ ಬದುಕು ಪ್ರೇರಣೆಯಾಗ ಬೇಕು" ಎಂದು ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅವರು ಹೇಳಿದರು.
ನುಡಿ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೇೂಪಾಲಕೃಷ್ಣ ಎಂ.ಗಾಂವ್ಕರ್, ನುಡಿ ನಮನ ಸಲ್ಲಿಸಿ ಮಾತನಾಡಿದರು.
ಕಾಪು ಸಾಹಿತ್ಯ ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ರವಿರಾಜ್ ಶೆಟ್ಟಿ ಪ್ರಾಸ್ತಾವನೆಗೈದರು. ಗೌರವ ಕೇೂಶಾಧ್ಯಕ್ಷ ವಿದ್ಯಾಧರ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕಿ ದೀಪಿಕಾ ಸುವಣ೯ ವಂದಿಸಿದರು. ಕಾಪು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.