ಮಂಗಳೂರು, ಅ. 19 (DaijiworldNews/TA): ಚಿನ್ನಾಭರಣ ಕ್ಷೇತ್ರದಲ್ಲಿ ಕೇರಳದಲ್ಲಿ ಮನೆಮಾತಾಗಿರುವ "ಬಿಂದು" ಜ್ಯುವೆಲ್ಲರಿ ಮಂಗಳೂರು ಶೋರೂಂ ಬೆಂದೂರ್ ನ ಎಸ್ ಸಿಎಸ್ ಆಸ್ಪತ್ರೆ ಸಮೀಪ ರವಿವಾರ ಶುಭಾರಂಭಗೊಂಡಿತು. ದಕ್ಷಿಣ ಭಾರತದ ಪ್ರಖ್ಯಾತ ಚಲಚಿತ್ರ ನಟಿ ಸ್ನೇಹ ಪ್ರಸನ್ನ ಮಳಿಗೆಯನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, "ಬಿಂದು" ಜುವೆಲರಿ ತನ್ನ ಪಾರಂಪರಿಕತೆ ಮತ್ತು ಗುಣಮಟ್ಟದಿಂದ ಗ್ರಾಹಕರ ಪ್ರೀತಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಸಂಸ್ಥೆಯ ಜತೆ ಗುರುತಿಸಿಕೊಂಡಿದ್ದು, ಇದೊಂದು ಹೆಮ್ಮೆಯ ಕ್ಷಣವಾಗಿದೆ. ಮಂಗಳೂರಿಗೂ ಮೊದಲ ಬಾರಿಗೆ ಭೇಟಿ ನೀಡಿದ್ದು, ಮಂಗಳೂರಿಗೆ ಇನ್ನೊಂದು ಹೆಗ್ಗುರುತಾಗಿ ಬಿಂದು ಸೇರ್ಪಡೆಗೊಂಡಿದೆ ಎಂದರು. ಇದೇ ವೇಳೆ ಅವರು ಸಂಸ್ಥೆಯ ಸಿಎಸ್ ಆರ್ ಚಟುವಟಿಕೆಯ ಭಾಗವಾದ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ‘ಸ್ವರ್ಣ ಬಿಂದು‘ ಯೋಜನೆಗೆ ಚಾಲನೆ ನೀಡಿದರು.
‘ಮೈ ಬ್ಲೂ ಡೈಮಂಡ್‘ ವಜ್ರಾಭರಣವನ್ನು ಸ್ನೇಹ ಪ್ರಸನ್ನ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯೋಗೇಶಾನಂದಜೀ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ವೈ., ಕರ್ನಾಟಕ ರಾಜ್ಯ ಅಲೈಡ್ ಮತ್ತು ಹಲ್ತ್ ಕೇರ್ ಕೌನ್ಸಿಲ್ ಚೇರ್ಮನ್ ಡಾ| ಯು.ಟಿ. ಇಫ್ತಿಕರ್ ಅಲಿ ಫರೀದ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸ್ಸರ್, ನಟರಾದ ಶೋಧನ್ ಶೆಟ್ಟಿ, ಅಮೀಶ್, ಬಿಂದು ಜುವೆಲರಿ ಮಾಲಕರಾದ ಅಭಿಲಾಷ್ ಕೆ.ವಿ. ಮತ್ತು ಡಾ| ಅಜಿತೇಶ್ ಕೆ.ವಿ., ಮಾಲಕರ ತಾಯಿ ಶೋಭನಾ ಉಪಸ್ಥಿತರಿದ್ದರು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.