ಸುಳ್ಯ, ಅ. 23 (DaijiworldNews/ AK):ಅರಂತೋಡಿನಲ್ಲಿ ಎರಡು ಸ್ಕೂಟಿಗಳ ನಡುವೆ ಗುರುವಾರ ಅಪಘಾತವಾಗಿ ಸ್ಕೂಟಿಗಳು ಜಖಂಗೊಂಡ ವರದಿಯಾಗಿದೆ.


ಕಾಸರಗೋಡು ಮೂಲದ ಕಬೀರ್ ಎಂಬವರು ಮಡಿಕೇರಿಯಿಂದ ಕಾಸರಗೋಡಿಗೆ ತೆರಳುತ್ತಿದ್ದಾಗ ತೊಡಿಕಾನ ಕಡೆಯಿಂದ ಬರುತ್ತಿದ್ದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಗುಣಶೀಲ ಅವರ ಸಹೋದರ ದೊರೈಸ್ವಾಮಿ .ಪಿ ಅವರ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.
ಪರಿಣಾಮವಾಗಿ ಸ್ಕೂಟಿ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.