ಮಂಗಳೂರು, ಅ. 31 (DaijiworldNews/AA): ಯು ಟಿ ಖಾದರ್ ಶಾಸಕರಿಗೆ ಕೇವಲ ಸ್ಪೀಕರ್ ಆದರೆ ಸಾಮಾನ್ಯ ಜನರಿಗೆ ಅವರು ಕೇಳುಗ. ಯು ಟಿ ಖಾದರ್ ತಮಗೆ ನೀಡಲಾದ ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ತಿಳಿಸಿದ್ದಾರೆ.

"ಇಂದಿನವರೆಗೂ ಸಾಮಾನ್ಯ ಜನರಿಗೆ ಸ್ಪೀಕರ್ ಕಚೇರಿ ಎಲ್ಲಿದೆ ಎಂದು ತಿಳಿದಿರಲಿಲ್ಲ, ಆದರೆ ಈಗ ಬಹುತೇಕ ಎಲ್ಲಾ ದಿನಗಳಲ್ಲೂ ಸ್ಪೀಕರ್ ಕಚೇರಿ ತಮ್ಮ ಸಮಸ್ಯೆಗಳೊಂದಿಗೆ ಬಂದ ಸಾಮಾನ್ಯ ಜನರಿಂದ ತುಂಬಿದೆ. ಈ ರೂಪಾಂತರದ ಕೀರ್ತಿ ಯು ಟಿ ಖಾದರ್ ಜಿ ಅವರಿಗೆ ಸಲ್ಲುತ್ತದೆ, ಎಲ್ಲಾ ಶಾಸಕರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದರಿಂದ ಹಿಡಿದು ರಾತ್ರಿ 12 ಗಂಟೆಯವರೆಗೆ ಅಧಿವೇಶನ ನಡೆಸುವವರೆಗೆ, ಖಾದರ್ ದೇಶಾದ್ಯಂತದ ಸಭಾಧ್ಯಕ್ಷರಿಗೆ ಮಾದರಿಯಾಗಿದ್ದಾರೆ" ಎಂದು ಅವರು ಹೇಳಿದರು.
"ಸ್ಪೀಕರ್ ಆಗಿರುವವರು ಯಾವಾಗಲೂ ವಿಪಕ್ಷದ ಮಿತ್ರ ಆಗಿರಬೇಕು. ಈ ಮಾತನ್ನು ಅಕ್ಷರ ಪಾಲಿಸಿಕೊಂಡು ಬರುತ್ತಿರುವವರು ಸ್ಪೀಕರ್ ಯುಟಿ ಖಾದರ್, ಈ ವಿಷಯದಲ್ಲಿ ಈ ಹಿಂದಿನವರು ಹೇಗಿದ್ದರೂ ಎನ್ನುವುದು ನಾನು ಹೆಚ್ಚು ಚರ್ಚೆಗೆ ಹೋಗುವುದಿಲ್ಲ. ಆದರೆ ಯುಟಿ ಖಾದರ್ ಸ್ಪೀಕರ್ ಆದ ಬಳಿಕ ವಿಧಾನಸೌಧದ ವಿಧಾನಸಭೆಯ ಕಲಾಪದ ಚಿತ್ರಣವೇ ಬದಲಾಗಿದೆ" ಎಂದರು.
"ಯುಟಿ ಖಾದರ್ ಅವರ ಕಾರ್ಯ ಶೈಲಿ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಚರ್ಚೆಯಲ್ಲಿದೆ. ಸ್ಪೀಕರ್ ಇದ್ದರೆ ಹೀಗಿರಬೇಕು ಎಂದು ಅವರ ಉಪನ್ಯಾಸ ಕೇಳಲು ವಿದೇಶದಿಂದ ಕರೆ ಬರುತ್ತಿದೆ. ವಿದೇಶಿಯರು ಇಲ್ಲಿಗೆ ಬಂದು ಅವರ ಕಾರ್ಯ ವಿಧಾನವನ್ನ ನೋಡಿ ಹೊಗಳಿ ಹೋಗುತ್ತಿದ್ದಾರೆ. ಇದನ್ನೆಲ್ಲಾ ನೋಡಿ ನಮ್ಮ ವಿಪಕ್ಷ ನಾಯಕರಿಗೆ ಸಹಿಸಲಾಗುತ್ತಿಲ್ಲ ಎಂದೆನಿಸುತ್ತಿದೆ. ಅದಕ್ಕಾಗಿ ಸ್ಪೀಕರ್ ಯುಟಿ ಖಾದರ್ ಅವರ ಮೇಲೆ ವೃತಾ ಆರೋಪಗಳನ್ನ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
"ವಿಧಾನಸೌಧವನ್ನು ಚಂದಗಾಣಿಸುವುದು, ಶಾಸಕರು ಕಲಾಪಗಳಲ್ಲಿ ಸಕ್ರಿಯ ರಾಗಿರುವಂತೆ ಮಾಡುವುದು ಯುಟಿ ಖಾದರ್ ಅವರ ಮುಖ್ಯ ಉದ್ದೇಶ. ಅದನ್ನು ನಿಭಾಯಿಸುವ ದೆಸೆಯಲ್ಲಿ ತನಗೆ ಸಾಧ್ಯವಿರುವ ಅಧಿಕಾರ ವ್ಯಾಪ್ತಿಯನ್ನ ಮೊದಲ ಬಾರಿಗೆ ಬಳಸಿ ಶಿಸ್ತು ಜಾರಿಗೆ ತಂದ ಶ್ರೇಯ ಯುಟಿ ಖಾದರ್ ಅವರಿಗೆ ಸಲ್ಲುತ್ತದೆ. ಇದು ತಮ್ಮಿಂದ ಸಾಧ್ಯವಾಗಲಿಲ್ಲ ಎಂಬ ಹೊಟ್ಟೆಕಿಚ್ಚಿನ ಸ್ವಭಾವದ ವಿಪಕ್ಷ ಮಿತ್ರರು ಯು ಟಿ ಖಾದರ್ ರ ಮೇಲೆ ಆರೋಪಿಸುತ್ತಾರೆ ಅಷ್ಟೇ" ಎಂದು ಹೇಳಿದರು.