ಬಂಟ್ವಾಳ,ಮಾ. 02 (DaijiworldNews/TA): ಸೇವೆಯ ಮೂಲಕ ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಾದರಿ ಎಣಿಸಿದ "ರಥಬೀದಿ ಜವನೆರ್ ಕಾರಿಂಜ" ಸಂಘಟನೆಯು ಮಂತ್ತೊಂದು ಸಮಾಜ ಮುಖಿ ಕಾರ್ಯಕ್ರಮ ಮಾಡಿ ಮಾದರಿ ಸೈ ಎಣಿಸಿದೆ. ಇದರ ಭಾಗವಾಗಿ ತಂಡದ ಸದಸ್ಯರೊಬ್ಬರ ಗದ್ದೆಯಲ್ಲಿ ತಾವೇ ಬೆಳೆದ ಭತ್ತದ ಪೈರನ್ನು ಮೂರು ಗೋಶಾಲೆಗಳಿಗೆ ಈಗಾಗಲೇ ನೀಡಿದ್ದು ಇದರಲ್ಲಿ ಬಂದ ಅಕ್ಕಿಯನ್ನು ಎರಡು ವೃದ್ದಾಶ್ರಮಗಳಿಗೆ ಅರ್ಪಿಸಿದ್ದಾರೆ.


"ನಮ್ಮನೆ ಹೋಮ್ ಕೇರ್ ಸೆಂಟರ್" ಮಿನಾಲ್ದೊಟ್ಟು ಮಣಿನಾಲ್ಕೂರು ಆಶ್ರಮಕ್ಕೆ ಸುಮಾರು 250 ಕೆ ಜಿ ಅಕ್ಕಿ ಹಾಗೂ ಫಲವಸ್ತು ಹಾಗೂ "ಶ್ರೀ ಗುರು ಚೈತನ್ಯ ಸೇವಾಶ್ರಮ ಗುಂಡೂರಿ" ವೇಣೂರು ಆಶ್ರಮಕ್ಕೆ ಸುಮಾರು 500 ಕೆ ಜಿ ಅಕ್ಕಿ ನೀಡಿ ಮತ್ತು ಒಂದು ದಿನದ ಅನ್ನದಾನ ನೀಡಿದರು. ಸಂಘದ ಸದಸ್ಯರೆಲ್ಲರು ಆಶ್ರಮದವರೊಟ್ಟಿಗೆ ಸಹಭೋಜನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೂ ಮುಂದೆಯೂ ಇನ್ನಷ್ಟು ಉಪಯುಕ್ತ ಸೇವೆಯನ್ನು ಮಾಡುವ ಸಂಕಲ್ಪ ಮಾಡಿದ್ದೇವೆ ತಂಡದವರು ತಿಳಿಸಿದ್ದಾರೆ.