ಮಂಗಳೂರು, ಮಾ. 06 (DaijiworldNews/TA): ಈ ಬಜೆಟ್ ಕೂಡ ಹಿಂದಿನ ಬಜೆಟ್ನಂತೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಬಜೆಟ್ ಗಾತ್ರ ಹಿಗ್ಗಿದ್ದು, ಸರ್ಕಾರದ ಸಾಲದ ಹೊರೆ ಹೆಚ್ಚಾಗಿದೆ. ಅಬಕಾರಿ ಇಲಾಖೆಯ ಮೂಲಕ ಹೆಚ್ಚಿನ ರಾಜಸ್ವವನ್ನು ಸರ್ಕಾರಿ ನಿರೀಕ್ಷಿಸಿರುವುದು ರಾಜ್ಯದ ಜನರಿಗಾಗಿ ದುರಂತವಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಅವರ ಈ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಾಲದಲ್ಲಿ ಮುಳುಗಿರುವ ಈ ಸರ್ಕಾರ ಶೇ. 25ರಷ್ಟು ಘೋಷಣೆಗಳನ್ನು ಮಾತ್ರ ಕಾರ್ಯಗತ ಮಾಡುವುದು ಸಾಧ್ಯ. ಬಜೆಟ್ನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿರುವುದು ದೊಡ್ಡ ಸಾಧನೆ, ಆದರೆ ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಪುತ್ತೂರು ಮೆಡಿಕಲ್ ಕಾಲೇಜ್ಗೆ ಯಾವುದೇ ಅನುದಾನ ಘೋಷಣೆ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಇದು ನಿರಾಶಾಜನಕ ಬಜೆಟ್ ಎಂದು ನಾವು ಹೇಳಬಹುದು. ಎಂಬುವುದಾಗಿ ರಾಜ್ಯ ಬಜೆಟ್ ಬಗ್ಗೆ ಟೀಕಾಪ್ರಹಾರ ಮಾಡಿದ್ದಾರೆ.
ಮಾಜಿ ಸಂಸದರು ಈ ಬಜೆಟ್ ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದ ಅಭಿವೃದ್ಧಿ ಸಮತೋಲನ ಹಾಗೂ ದಕ್ಷಿಣ ಕನ್ನಡದ ಹಕ್ಕುಗಳ ನಿರ್ಲಕ್ಷ್ಯ ಕುರಿತು ಗಮನ ಸೆಳೆದಿದ್ದಾರೆ.