ಉಡುಪಿ, ಮಾ. 06 (DaijiworldNews/TA): ರಾಜ್ಯ ಬಜೆಟ್ ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ವಿಚಾರದ ಬಗ್ಗೆ ಉಡುಪಿಯಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸರ್ಕಾರ ಡಿಜಿಟಲ್ ಪಾಲಿಸಿ ಮಾಡಲು ತೀರ್ಮಾನಿಸಿದ್ದು, ಮನೋವೈದ್ಯನಾಗಿ ಈ ನಿರ್ಧಾರವನ್ನು ನಾನು ಸ್ವಾಗತ ಮಾಡ್ತೇನೆ. ಆಸ್ಪತ್ರೆ ವಾರ್ಡ್ ನಲ್ಲಿ ಪ್ರತಿದಿನ ಇಬ್ಬರು ಅಂಡರ್ 18 ಮಕ್ಕಳು ದಾಖಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಳಕೆಯಿಂದಲೇ ಹೀಗಾಗುತ್ತಿದೆ.
ಸೋಷಿಯಲ್ ಮೀಡಿಯಾ ಮೂಲಕ ಅಪರಿಚಿತರಿಂದ ಮೋಸ ಹೋದ ಮಕ್ಕಳು ಕೂಡಾ ಇದ್ದಾರೆ. ಹಾಗಾಗಿ ಇದು ಸರ್ಕಾರದ ಸಮಯೋಚಿತ ನಿರ್ಧಾರವಾಗಿದೆ ಎಂದು ಅವರು ಸ್ವಾಗತಿಸಿದ್ದಾರೆ.