ಮಂಗಳೂರು, ಏ. 18 (DaijiworldNews/AK): ಅಸೈಗೋಳಿಯ ಕ್ಷೇವಿಯನ್ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿರುವ ಮತ್ತು ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ವಂದನೀಯ ಧರ್ಮ ಗುರುಗಳು ಮೆಲ್ವಿನ್ ಜೆ ಪಿಂಟೋ ಅವರರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು.





ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಜೆ.ಜೆ.ವಿ ಫೆರ್ನಾಂಡಿಸ್ ಅಗಲಿದ ಗಣ್ಯ ವ್ಯಕ್ತಿಯ ಸೇವೆಯ ಬಗ್ಗೆ ಸವಿವರವಾಗಿ ವಿವರಿಸಿದರು. ಬಳಿಕ ಮೌನ ಪ್ರಾರ್ಥನೆ ಮತ್ತು ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಸಲ್ಲಿಸಲಾಯಿತು.
ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷರಾದ ಅಲ್ವಿನ್ ಡಿಸೋಜಾ ಸ್ವಾಗತಿಸಿದರು. ಪ್ರಬಾರ ಪ್ರಾಂಶುಪಾಲರಾದ ಶಶಿಕಲಾ ಧನ್ಯವಾದ ಸಮರ್ಪಿಸಿದರು. ಶಿವಾನಂದ ಜೆ.ಟಿಒ ಕಾರ್ಯಕ್ರಮ ನಿರೂಪಿಸಿದರು.