ಮಂಗಳೂರು, ಮೇ. 28 (DaijiworldNews/AK): ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಸ್ತೆ ಉದ್ರಿಕ್ತ ಘಟನೆಗಳು ಗಮನಾರ್ಹವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ಒಂದು ಕ್ಷಣ ಸಹನೆ ಕಳೆದುಕೊಂಡರೆ ವಾಹನ ಚಾಲಕರು ಗಂಭೀರ ಕಾನೂನು ತೊಂದರೆಗೆ ಸಿಲುಕಬಹುದು ಎಂದು ಕರಾವಳಿ ಕರ್ನಾಟಕದ ಪೊಲೀಸರು ಎಚ್ಚರಿಸಿದ್ದಾರೆ.

ಹಾರ್ನ್ ಸದ್ದು ಮಾಡುವುದು, ಅಪಾಯಕಾರಿ ಓವರ್ಟೇಕಿಂಗ್ ಅಥವಾ ಸೈಡ್ ನಿರಾಕರಿಸುವುದು ಮೊದಲಾದ ವಿಚಾರಗಳಿಂದ ಆರಂಭವಾಗುವ ರೋಡ್ ರೇಜ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಉಲ್ಲಂಘಟನೆ ಮತ್ತು ಅಕ್ರಮಕಾರಿ ವರ್ತನೆ ವಿರುದ್ದ ಕಠಿಣ ಕ್ರಮಕೈಗೊಳ್ಳುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಕಳೆದ ವರ್ಷದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 18 ರಿಂದ 22 ಪ್ರಕರಣಗಳು ವಿವಿಧ ರಾಣೆಗಳಲ್ಲಿ ದಾಖಲಾಗಿವೆ.
ನೆರೆಯ ಉಡುಪಿ ಜಿಲ್ಲೆಯಲ್ಲಿ ಇನ್ನೂ ಏಳರಿಂದ ಹತ್ತು ಘಟನೆಗಳು ದಾಖಲಾಗಿವೆ. ಈ ಪ್ರವೃತ್ತಿ ನಿರಂತರವಾಗಿ ಹದಗೆಡುತ್ತಿದೆ ಎಂದು ಅಧಿಕಾರಿಗಳು ಗಮನಸೆಳೆದಿದ್ದಾರೆ - 2023 ರಲ್ಲಿ ಕೇವಲ ಎಂಟರಿಂದ 10 ಪ್ರಕರಣಗಳು ವರದಿಯಾಗಿದ್ದವು, 2024 ರಲ್ಲಿ ಈ ಸಂಖ್ಯೆ 12 ರಿಂದ 15 ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಘಟನೆಗಳು ವರದಿಯಾಗಿವೆ.
ಇತ್ತೀಚೆಗೆ ನಂತೂರು ಜಂಕ್ಷನ್ನಲ್ಲಿ ನಡೆದ ಒಂದು ಪ್ರಕರಣದಲ್ಲಿ, ದ್ವಿಚಕ್ರ ವಾಹನ ಸವಾರನೊಬ್ಬ ಯಾವುದೇ ಪ್ರಚೋದನೆಯಿಲ್ಲದೆ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಅಂತಿಮವಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಒಂದು ತಿಂಗಳ ಹಿಂದೆ ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪೊಲೀಸರು ಜನನಿಬಿಡ ರಸ್ತೆಗಳಲ್ಲಿ ಅಸಹನೆ ಮತ್ತು ಆಕ್ರಮಣಶೀಲತೆಯ ಬೆಳೆಯುತ್ತಿರುವ ಸಂಸ್ಕೃತಿಯನ್ನು ಎತ್ತಿ ತೋರಿಸಿದೆ.
ರೋಡ್ ರೇಜ್ ಕೇವಲ ಮಾತಿನ ಚಕಮಕಿಯಲ್ಲ, ಬದಲಾಗಿ ಭಾರತೀಯ ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಒತ್ತಿ ಹೇಳಿದರು.
ಘಟನೆಯ ತೀವ್ರತೆಗೆ ಅನುಗುಣವಾಗಿ, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ, ವಾಹನಗಳ ತಪ್ಪಾದ ನಿಯಂತ್ರಣ, ಕ್ರಿಮಿನಲ್ ಬೆದರಿಕೆ, ಹಲ್ಲೆ ಮತ್ತು ಆಸ್ತಿ ನಾಶ ಸೇರಿದಂತೆ ಆರೋಪಗಳನ್ನು ಹೊರಿಸಬಹುದು. ತೀವ್ರತರವಾದ ಸಂದರ್ಭಗಳಲ್ಲಿ, ಕೊಲೆ ಯತ್ನಕ್ಕೆ ಸಂಬಂಧಿಸಿದ ವಿಭಾಗಗಳನ್ನು ಸಹ ಅನ್ವಯಿಸಬಹುದು.
ಹಿಂದಿನ ವಾಹನಗಳಿಂದ ಪದೇ ಪದೇ ಹಾರ್ನ್ ಮಾಡುವುದು, ಹಠಾತ್ ಓವರ್ಟೇಕ್ ಮಾಡುವುದು, ಸೈಡ್ಗೆ ಹೋಗಲು ನಿರಾಕರಿಸುವುದು ಅಥವಾ ಜನದಟ್ಟಣೆಯ ಪ್ರದೇಶಗಳಲ್ಲಿ ಅಜಾಗರೂಕ ಚಾಲನೆ - ಇವು ಸಂಚಾರ ಕಿರಿಕಿರಿ ಉಂಟುಮಾಡುವ ಕಾರಣಗಳಿಂದ ಅನೇಕ ಘರ್ಷಣೆಗಳು ಉಂಟಾಗುತ್ತವೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಮಾನಸಿಕ ಒತ್ತಡ, ವೈಯಕ್ತಿಕ ಹತಾಶೆ, ತುರ್ತು ಪ್ರಯಾಣದ ಸಮಯದಲ್ಲಿ ವಿಳಂಬ ಮತ್ತು ಕುಡಿದು ವಾಹನ ಚಲಾಯಿಸುವುದು ಸಹ ಇಂತಹ ಘಟನೆಗಳ ಹಿಂದಿನ ಪ್ರಮುಖ ಪ್ರಚೋದಕಗಳಾಗಿ ಹೊರಹೊಮ್ಮಿವೆ.
ಸಂಜೆ ಮತ್ತು ತಡರಾತ್ರಿಯ ಸಮಯದಲ್ಲಿ, ವಿಶೇಷವಾಗಿ ವಾರಾಂತ್ಯಗಳಲ್ಲಿ ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರ ಒತ್ತಡದ ಮಟ್ಟಗಳು ಹೆಚ್ಚಾಗುವ ಸಮಯದಲ್ಲಿ ರೋಡ್ ರೇಜ್ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಅಧಿಕಾರಿಗಳು ಗಮನಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು, ವಿತರಣಾ ಸಿಬ್ಬಂದಿ ಮತ್ತು ಆಟೋ ಚಾಲಕರು ಇಂತಹ ಘರ್ಷಣೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ.
ಪ್ರತೀಕಾರದ ವರ್ತನೆಯ ವಿರುದ್ಧ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಎದುರಿಸುವವರೂ ಸೇರಿದಂತೆ ರಸ್ತೆ ಉದ್ರಿಕ್ತ ಘಟನೆಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
"ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ, ಇನ್ನೊಬ್ಬ ವ್ಯಕ್ತಿ ತಾಳ್ಮೆ ಕಳೆದುಕೊಂಡು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಹೆಚ್ಚು ಅಪಾಯಕಾರಿಯಾಗುತ್ತದೆ. ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿದರೆ ಮತ್ತು ಸಂಯಮದಿಂದ ವರ್ತಿಸಿದರೆ, ರೋಡ್ ರೇಜ್ಗೆ ಅವಕಾಶವಿರುವುದಿಲ್ಲ" ಎಂದು ಅವರು ಹೇಳಿದರು.