ಕುಂದಾಪುರ ಜು 16(DaijiworldNews/AK):ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದ್ದು ಹಾಲಾಡಿ ಸಮೀಪದ ಚೋರಾಡಿಯಲ್ಲಿ ಸೇತುವೆಯ ಸಂಪರ್ಕವೇ ಕಡಿದು ನದಿ ಪಾಲಾಗಿದೆ.





ಸೇತುವೆಯ ಸಂಪರ್ಕ ಕೊಂಡಿ ಸಂಪೂರ್ಣವಾ ಗಿ ಕುಸಿದು ಹೋಗಿದೆ. ಕಳೆದ ಎರಡು ವರ್ಷದ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.ಹಾಲಾಡಿ ಟಿವಿಎಸ್ ಶೋರೂಂ ಹತ್ತಿರದಿಂದ ಮುದೂರಿಗೆ ಹೋಗುವ ಮಾರ್ಗದ ಸೇತುವೆ ಇದಾಗಿದ್ದು ಈ ಭಾಗಕ್ಕೆ ಸಂಪರ್ಕ ಬೆಸೆಯುವ ಪ್ರಮುಖ ಸೇತುವೆಯಾಗಿದೆ.
ನೀರಿನ ರಭಸಕ್ಕೆ ಸೇತುವೆಯ ಬಳಿ ಸಂಪರ್ಕ ಸಂಪೂರ್ಣ ಕುಸಿದು ನೀರುಪಾಲಾಗಿದೆ. ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಅಧಿಕಾರಿಗಳು ಭೇಟಿ ನೀಡಿದ್ದಾರೆ.