ಉತ್ತರಪ್ರದೇಶ,ನ.26(DaijiworldNews/AK): ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋ ಗಿ, ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರನ್ನು ಫಾರೂಕಾಬಾದ್ ಸಹೋದರರಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ.
ಗೂಗಲ್ ಮ್ಯಾಪ್ ಇಂಡಿಯಾ ಹಾಗೂ ಉತ್ತರ ಪ್ರದೇ ಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬದೌನ್ ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂ ದು ರಾಯ್ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಬರೇಲಿ ಸಮೀಪ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇ ತುವೆ ಬಳಸಿದ್ದಾರೆ. ಆದರೆ, ಆ ಸೇತುವೆ ಅಪೂರ್ಣ ವಾಗಿತ್ತು. ಇದರಿಂದ ನದಿಗೆ ರಭಸವಾಗಿ ಬಿದ್ದ ಕಾರು ಸಂಪೂರ್ಣ ಜಖಂ ಗೊಂಡಿತ್ತು. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು.
ಗೂಗಲ್ ಮ್ಯಾಪ್ ಹಾಗೂ ನಮ್ಮ ಲೋ ಕೋ ಪಯೋ ಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಈ ದುರಂತ ಸಂಭವಿಸಿರುವುದು ಮೇ ಲ್ನೋಟಕ್ಕೆ ತಿಳಿದು ಬಂದಿದೆ.