ನವದೆಹಲಿ, ಡಿ.24(DaijiworldNews/AK):ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಅನಿರ್ವಾಯತೆ ದೇಶದ ಜನತೆಗೆ ಎದುರಾಗಿದ್ದು, ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ತರಕಾರಿ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರು ಆಹಾರ ಪದಾರ್ಥ ಗಳ ಬೆಲೆ ಏರಿಕೆ ಕುರಿತು ಗೃಹಿಣಿಯರ ಜೊತೆ ಸಂವಾದ ನಡೆಸಿದ್ದಾರೆ. ಈ ಕುರಿತ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಇಲ್ಲಿನ ಸ್ಥಳೀಯ ಮಾರುಕಟ್ಟೆಗೆ ತೆರಳಿ ಜನರೊಂದಿಗೆ ಆಹಾರ ಪದಾರ್ಥ ಗಳ ಖರೀದಿ ಮಾಡಿದೆ. ಈ ವೇ ಳೆ ಹಣದುಬ್ಬರವು ಪ್ರತಿಯೊಬ್ಬರನ್ನು ಹೇಗೆ ತೊಂದರೆಗೆ ತಳ್ಳಿದೆ ಎಂಬ ಬಗ್ಗೆ ವ್ಯಾಪಾರಿಗಳ ಬಳಿ ಚರ್ಚಿಸಿದೆ ಎಂ ದು ವಿಡಿಯೊದಲ್ಲಿ ರಾಹುಲ್ ಹೇ ಳಿದ್ದಾರೆ.
ಒಂದು ಕಾಲದಲ್ಲಿ ಕೆ.ಜಿಗೆ 40 ಇದ್ದ ಬೆಳ್ಳುಳ್ಳಿ ಬೆಲೆ ಇಂದು 400 ಆಗಿದೆ. ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವುದರಲ್ಲಿ ಯೂರಾಜಿಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.