ನವದೆಹಲಿ, ಡಿ.26(DaijiworldNews/ AK): ಇಂಡಿಯಾ ಒಕ್ಕೂಟದಲ್ಲಿ ಭಿನ್ನಮತ ಈಗ ತಾರಕಕ್ಕೇರಿದ್ದು ಕಾಂಗ್ರೆಸ್ ವಿರುದ್ಧ ಆಪ್ ಬಂಡಾಯದ ಬಾವುಟ ಹಾರಿಸಿದೆ.
https://daijiworld.ap-south-1.linodeobjects.com/Linode/img_tv247/26-12-2024AKARVIND.jpg
ಆಪ್ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಯಿಂದ ಆಪ್ ಕೆಂಡವಾಗಿದ್ದು INDIA ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಚಾಟನೆ ಮಾಡುವಂತೆ ಇತರ ಪಕ್ಷಗಳ ಜೊತೆ ಮನವಿ ಮಾಡಿದೆ ಎಂದು ವರದಿಯಾಗಿದೆ
ದೆಹಲಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲು ಅರವಿಂದ್ ಕೇಜ್ರಿವಾಲ್ ಕಾರಣ. 2013 ರಲ್ಲಿ ಆಪ್ನ 40 ದಿನಗಳ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ದೆಹಲಿಯಲ್ಲಿ ದುರ್ಬಲವಾಗಿದೆ ಎಂದು ಅಜಯ್ ಮಾಕೇನ್ ಡಿ.25 ಎಂದು ಹೇಳಿಕೆ ನೀಡಿದ್ದರು.
ಅಜಯ್ ಮಾಕೆನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆಪ್ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಉಚ್ಚಾಟನೆಗೆ ಬೇಡಿಕೆ ಇಟ್ಟಿದೆ. ಈ ವಿಚಾರದ ಬಗ್ಗೆ ಇಂದು ಅಧಿಕೃತವಾಗಿ ಆಪ್ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.