ಬೆಂಗಳೂರು, ಮೇ. 28 (DaijiworldNews/TA): ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ ಎಂಬುವುದಾಗಿ ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಒಬ್ಬ ಕಲಾವಿದನಾಗಿ ಅವರಿಗೆ ಎಲ್ಲಿ, ಏನು ಮತ್ತು ಹೇಗೆ ಮಾತಾಡಬೇಕು ಎಂಬುವುದು ಗೊತ್ತಿಲ್ಲ, ಅವರು ಆಡಿದ ಮಾತು ಕನ್ನಡನಾಡಿನ ಜನತೆಗೆ ಎಸಗಿದ ಅಪಮಾನವಾಗಿದೆ, ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂಬುವುದಾಗಿ ವಾಟಾಳ್ ಹೇಳಿದರು.
ಜೂನ್ 5ರಂದು ಅವರ ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾದರೆ ಕನ್ನಡಪರ ಸಂಘಟನೆಗಳು ಚಿತ್ರಮಂದಿರದ ಮುಂದೆ ಧರಣಿ ನಡೆಸಿ ಚಲನಚಿತ್ರ ಪ್ರದರ್ಶನ ನಿಲ್ಲಿಸಲಿದೆ ಎಂದು ನಾಗರಾಜ್ ಹೇಳಿದ್ದಾರೆ.