ಉತ್ತರ ಪ್ರದೇಶ, ಜೂ. 01 (DaijiworldNews/AA): ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಲು ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಅಗತ್ಯ. ಇದೇ ರೀತಿ ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿಭೋರ್ ಭಾರದ್ವಾಜ್ ಅವರ ಯಶೋಗಾಥೆ ಇದು.

ವಿಭೋರ್ ಭಾರದ್ವಾಜ್ ಅವರು ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಉತ್ರಾವಳಿ ಗ್ರಾಮದವರು. ದೆಹಲಿ ವಿಶ್ವವಿದ್ಯಾಲಯದ ಪ್ರಸಿದ್ಧ ಹಂಸರಾಜ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿದರು.
ನಂತರ, ವಿಭೋರ್ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪರೀಕ್ಷೆಯ ತಯಾರಿಗಾಗಿ ಆನ್ಲೈನ್ ಕೋಚಿಂಗ್ ಮತ್ತು ಸ್ವಯಂ ಅಧ್ಯಯನ ನಡೆಸಿದರು. ಅವರು ಕೇವಲ ಏಳು ತಿಂಗಳಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಿದರು.
2022ರಲ್ಲಿ ಮೊದಲ ಬಾರಿಗಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 743 ರ್ಯಾಂಕ್ ಗಳಿಸುತ್ತಾರೆ. ಆದರೆ ಇದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಗುರಿ ಹೊಂದಿದ್ದ ಅವರು, 2024 ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು 19ನೇ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.