ತಮಿಳುನಾಡು, ಡಿ. 10 (DaijiworldNews/TA): ಕನ್ಯಾಕುಮಾರಿ ಜಿಲ್ಲೆಯ ಮಿಡಲಂ ಕಡಲತೀರದಲ್ಲಿ ಮಂಗಳವಾರ ಅತಿದೊಡ್ಡ ಆಕಾರದ ಸತ್ತ ತಿಮಿಂಗಿಲವೊಂದು ತೀರಕ್ಕೆ ತೇಲಿ ಬಂದಿದೆ. ಸ್ಥಳೀಯ ನಿವಾಸಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ತಿಮಿಂಗಿಲವನ್ನು ಪರಿಶೀಲಿಸಿದ್ದು, ದೊಡ್ಡ ಹಡಗು ಅಥವಾ ಮೀನುಗಾರಿಕಾ ನೌಕೆಗೆ ಡಿಕ್ಕಿ ಹೊಡೆದ ಪರಿಣಾಮ ತಿಮಿಂಗಿಲ ಸತ್ತಿರಬಹುದೆಂದು ಪ್ರಾಥಮಿಕ ಶಂಕೆ ವ್ಯಕ್ತಪಡಿಸಿದ್ದಾರೆ.
ಪರಿಶೀಲನೆ ಬಳಿಕ ತಿಮಿಂಗಿಲದ ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗಿದ್ದು, ನಂತರ ಪರಿಸರ ನಿಯಮಗಳಂತೆ ಕಡಲತೀರದಲ್ಲೇ ಮಣ್ಣು ಮಾಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಉಂಟುಮಾಡಿದೆ.