ನವದೆಹಲಿ, ಡಿ. 24 (DaijiworldNews/AK):ಉನ್ನಾವೋ ಅತ್ಯಾಚಾರ ಘಟನೆಯ ಸಂತ್ರಸ್ತೆ ಇಂದು ಬುಧವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಹೋರಾಡಲು ಒಬ್ಬ ವಕೀಲರನ್ನು ನೇಮಿಸಿಕೊಡುವುದು ಸೇರಿದಂತೆ ಮೂರು ಮನವಿಗಳನ್ನು ಸಂತ್ರಸ್ತ ಬಾಲಕಿಯ ತಾಯಿ ಮಾಡಿದ್ದಾರೆ.

ಅಮ್ಮ ಮತ್ತು ಮಗಳ ಭೇಟಿ ಬಳಿಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ದೇಶದ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ. ‘ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತೆ. ಅತ್ಯಾಚಾರ ಸಂತ್ರಸ್ತರನ್ನು ಕ್ರಿಮಿನಲ್ಗಳಂತೆ ನಡೆಸಿಕೊಳ್ಳಲಾಗುತ್ತೆ. ಯಾವ ಸೀಮೆಯ ನ್ಯಾಯ ಇದು? ನಾವು ಸತ್ತ ಆರ್ಥಿಕತೆ ಮಾತ್ರ ಆಗುತ್ತಿಲ್ಲ, ಇಂಥ ಅಮಾನವೀಯ ಘಟನೆಗಳು ನಮ್ಮನ್ನು ಸತ್ತ ಸಮಾಜವಾಗಿ ಮಾರ್ಪಡಿಸುತ್ತಿವೆ’ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ನಲ್ಲಿ ಗುಡುಗಿದ್ದಾರೆ.
ಉನ್ನಾವೋದಲ್ಲಿ 2017ರಲ್ಲಿ ಆಗ 17 ವರ್ಷ ವಯಸ್ಸಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆದ ಆರೋಪ ಇರುವ ಪ್ರಕರಣ ಇದು. ಆಗ ಬಿಜೆಪಿ ನಾಯಕರಾಗಿದ್ದ ಮತ್ತು ಶಾಸಕನೂ ಆಗಿದ್ದ ಕುಲದೀಪ್ ಸಿಂಗ್ ಸೇರಿದಂತೆ ವಿವಿಧ ವ್ಯಕ್ತಿಗಳ ಮೇಲೆ ಆರೋಪ ದಾಖಲಾಗಿತ್ತು.