ಬೆಂಗಳೂರು, ಜ. 25 (DaijiworldNews/TA): ಭಾರತ ಸರ್ಕಾರವು ಪ್ರತೀ ವರ್ಷವೂ ಭಾರತೀಯ ನಾಗರಿಕರಿಗೆ ಸೇವೆಗಾಗಿ ಪದ್ಮ ಪ್ರಶಸ್ತಿಗಳನ್ನು ಘೋಷಿಸುತ್ತಾ ಬರುತ್ತದೆ. 2026 ರ ಸಾಲಿನಲ್ಲಿ ಒಟ್ಟು 5 ಜನರು *ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಜನ ಪದ್ಮಶ್ರೀ ಪ್ರಶಸ್ತಿ ಪಡೆಯಲಿದ್ದಾರೆ.

ಕರ್ನಾಟಕದ ಸಾಧಕರು : ಕಲೆ, ಸಾಹಿತ್ಯ, ಸಮಾಜ ಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ 7 ಮಂದಿ ಪುರಸ್ಕೃತರಾಗಿದ್ದಾರೆ. ಕಲಾ ಕ್ಷೇತ್ರದಲ್ಲಿ ಕರ್ನಾಟಕದ ಶತಾವಧಾನಿ ಆರ್. ಗಣೇಶ್ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು:
* ಧರ್ಮೇಂದ್ರ ಸಿಂಗ್ – ಕಲೆ, ಮಹಾರಾಷ್ಟ್ರ
* ಕೆ.ಟಿ. ಧಾಮಸ್ – ಸಾರ್ವಜನಿಕ ಆಡಳಿತ, ಕೇರಳ
* ಎನ್. ರಾಜಮ್ – ಕಲೆ, ಉತ್ತರ ಪ್ರದೇಶ
* ಪಿ. ನಾರಾಯಣನ್ – ಸಾಹಿತ್ಯ ಮತ್ತು ಶಿಕ್ಷಣ, ಕೇರಳ
* ವಿ.ಎಸ್. ಅಚ್ಯುತಾನಂದನ್ – ಸಾರ್ವಜನಿಕ ಆಡಳಿತ, ಕೇರಳ
ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು:
* ಅಲ್ಕಾ ಯಗ್ನಿಕ್ – ಕಲೆ, ಮಹಾರಾಷ್ಟ್ರ
* ಭಗತ್ ಸಿಂಗ್ ಕೋಶ್ಯಾರಿ – ಸಾರ್ವಜನಿಕ ಆಡಳಿತ, ಉತ್ತರಾಖಂಡ
* ಕಲ್ಲಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ – ವೈದ್ಯಕೀಯ, ತಮಿಳುನಾಡು
* ಮಮ್ಮುಟ್ಟಿ – ಕಲೆ, ಕೇರಳ
* ಡಾ. ದತ್ತಾತ್ರೇಯುಡು ನೋರಿ – ವೈದ್ಯಕೀಯ, ಅಮೆರಿಕಾ
* ಪಿಯೂಷ್ ಪಾಂಡೆ – ಕಲೆ, ಮಹಾರಾಷ್ಟ್ರ
* ಎಸ್ಕೆಎಂ ಮೈಲಾನಂದನ್ – ಸಾಮಾಜಿಕ ಸೇವೆ, ತಮಿಳುನಾಡು
* ಶತಾವಧಾನಿ ಆರ್. ಗಣೇಶ್ – ಕಲೆ, ಕರ್ನಾಟಕ
* ಶಿಬು ಸೊರೆನ್ – ಸಾರ್ವಜನಿಕ ಆಡಳಿತ, ಜಾರ್ಖಂಡ್
* ಉದಯ್ ಕೋಟಕ್ – ವ್ಯಾಪಾರ ಮತ್ತು ಕೈಗಾರಿಕೆ, ಮಹಾರಾಷ್ಟ್ರ
* ವಿ.ಕೆ. ಮಲ್ಹೋತ್ರಾ – ಸಾರ್ವಜನಿಕ ಆಡಳಿತ, ದೆಹಲಿ
* ವೆಳ್ಳಾಪ್ಪಳ್ಳಿ ನಟೇಶನ್ – ಸಾರ್ವಜನಿಕ ಆಡಳಿತ, ಕೇರಳ
* ವಿಜಯ್ ಅಮೃತ್ ರಾಜ್ – ಕ್ರೀಡೆ, ಅಮೆರಿಕಾ
ರಾಜ್ಯದ ಪದ್ಮಶ್ರೀ ಪುರಸ್ಕೃತರು:
* ಅಂಕೇಗೌಡ ಎಂ. – ಸಾಮಾಜಿಕ ಸೇವೆ
* ಎಸ್.ಜಿ. ಸುಶೀಲಮ್ಮ – ಸಾಮಾಜಿಕ ಸೇವೆ
* ಶಶಿಶೇಖರ್ ವೆಂಪತಿ – ಸಾಹಿತ್ಯ ಮತ್ತು ಶಿಕ್ಷಣ
* ಶುಭಾ ವೇಂಕಟೇಶ್ ಐಯ್ಯಂಗಾರ್ – ವಿಜ್ಞಾನ ಮತ್ತು ಎಂಜಿನಿಯರಿಂಗ್
* ಡಾ. ಸುರೇಶ್ ಹನಗವಾಡಿ – ವೈದ್ಯಕೀಯ
* ಟಿ.ಟಿ. ಜಗನ್ನಾಥನ್ – ವ್ಯಾಪಾರ ಮತ್ತು ಕೈಗಾರಿಕೆ
* ಪ್ರಭಾಕರ್ ಕೋರೆ – ಸಾಹಿತ್ಯ ಮತ್ತು ಶಿಕ್ಷಣ
ಈ ಬಾರಿ ಘೋಷಿಸಲಾದ ಪದ್ಮ ಪ್ರಶಸ್ತಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರ ಸಾಧನೆಗಳನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುತ್ತಿವೆ. ಕರ್ನಾಟಕದ 7 ಸಾಧಕರಿಗೆ ರಾಷ್ಟ್ರದ ಗೌರವ ಸಿಕ್ಕಿದ್ದು, ರಾಜ್ಯದ ಜನತೆಗೆ ಹೆಮ್ಮೆ ತಂದಿದೆ.