ನವದೆಹಲಿ, ಫೆ. 09 (DaijiworldNews/TA): ಕೃತಕ ಬುದ್ಧಿಮತ್ತೆಯನ್ನು (AI) ನಿಮ್ಮ ಯಜಮಾನನನ್ನಾಗಿ ಮಾಡಿಕೊಂಡು ಅದರ ಗುಲಾಮರಾಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ 2026 ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಭಯದಿಂದ ನೋಡುವ ಅಗತ್ಯವಿಲ್ಲ, ಆದರೆ ಅದನ್ನು ಅರ್ಥಮಾಡಿಕೊಂಡು ಜವಾಬ್ದಾರಿಯಿಂದ ಬಳಸಬೇಕು ಎಂದು ಹೇಳಿದರು.

ಸ್ಟಾರ್ಟ್ಅಪ್ಗಳು, ಪರೀಕ್ಷಾ ತಯಾರಿ, ವೃತ್ತಿಜೀವನ, ಶಿಸ್ತು ಮತ್ತು ಪ್ರೇರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. “ಪ್ರತಿ ತಂತ್ರಜ್ಞಾನ ಯುಗದಲ್ಲೂ ಇಂತಹ ಚರ್ಚೆಗಳು ಬರುತ್ತವೆ. ನಾವು ಭಯಪಡುವುದಿಲ್ಲ, ಆದರೆ ಅದರ ಗುಲಾಮರಾಗಲು ಶ್ರಮಿಸಬಾರದು. ತಂತ್ರಜ್ಞಾನ ನಮ್ಮ ಯಜಮಾನರಾಗಲು ನಾವು ಬಿಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಉದ್ಯೋಗಗಳ ಸ್ವರೂಪ ನಿರಂತರವಾಗಿ ಬದಲಾಗುತ್ತಿದ್ದು, ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಮೋದಿ ಹೇಳಿದರು. ಬೋರ್ಡ್ ಪರೀಕ್ಷೆಗಳ ಒತ್ತಡದ ನಡುವೆ ಈ ಸಂಚಿಕೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಮಾನಸಿಕ ಬಲ ನೀಡುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.
ಪರೀಕ್ಷಾ ಪೆ ಚರ್ಚಾ 2026ರ ಎರಡನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಆರಂಭಿಸಿದರು. ಛತ್ತೀಸ್ಗಢದ ವಿದ್ಯಾರ್ಥಿಯೊಬ್ಬರು ಭಾರತದಲ್ಲಿ ಭೇಟಿ ನೀಡಲು ಉತ್ತಮ ಪ್ರವಾಸಿ ಸ್ಥಳಗಳ ಕುರಿತು ಪ್ರಶ್ನಿಸಿದಾಗ, ಪ್ರಧಾನಿ ಉಪಯುಕ್ತ ಸಲಹೆಗಳನ್ನು ನೀಡಿದರು.
ಸ್ಫೂರ್ತಿ ಮತ್ತು ಶಿಸ್ತು ಕುರಿತು ಮಾತನಾಡಿದ ಪ್ರಧಾನಿ, “ಸ್ಫೂರ್ತಿಯ ಜೊತೆಗೆ ಶಿಸ್ತು ಕೂಡ ಅತ್ಯಗತ್ಯ. ಶಿಸ್ತು ಇಲ್ಲದಿದ್ದರೆ ಯಾವುದೇ ಸ್ಫೂರ್ತಿ ಫಲ ನೀಡುವುದಿಲ್ಲ. ರೈತನು ಮತ್ತೊಬ್ಬ ರೈತನಿಂದ ಸ್ಫೂರ್ತಿ ಪಡೆದು ಶ್ರಮಿಸಿದಾಗಲೇ ಯಶಸ್ಸು ಸಾಧ್ಯ,” ಎಂದು ಹೇಳಿದರು.
ಸ್ಟಾರ್ಟ್ಅಪ್ ಆರಂಭಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸಣ್ಣ ಮಟ್ಟದಲ್ಲಿ ಸ್ಟಾರ್ಟ್ಅಪ್ ಆರಂಭಿಸಬಹುದು. ನಿಮ್ಮ ಅಧ್ಯಯನದ ಜೊತೆಗೆ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, ಪ್ರತೀ ವಾರ ಅದರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ,” ಎಂದು ಸಲಹೆ ನೀಡಿದರು.
ಈ ವರ್ಷ ಮೊದಲ ಬಾರಿಗೆ ಪರೀಕ್ಷಾ ಪೆ ಚರ್ಚಾ ಹೊಸ ಸ್ವರೂಪವನ್ನು ಅಳವಡಿಸಿಕೊಂಡಿದ್ದು, ಪ್ರಧಾನಿ ಮೋದಿ ತಮಿಳುನಾಡು, ಛತ್ತೀಸ್ಗಢ, ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು.