ನವದೆಹಲಿ, ಫೆ. 13 (DaijiworldNews/AA): ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು-2008ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಭಾಗಶಃ ಸಂಚಾರ ಮುಕ್ತವಾಗಿರುವ ಶುಲ್ಕ ವಿನಾಯಿತಿ ಘೋಷಿಸಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಈ ನೂತನ ನಿಯಮಗಳು ಫೆಬ್ರವರಿ 15 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಹೊಸ ನಿಯಮದ ಪ್ರಕಾರ, ಯಾವುದೇ ಹೆದ್ದಾರಿ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿದ್ದಲ್ಲಿ, ಸಿದ್ಧವಾಗಿರುವ ಆ ಭಾಗಕ್ಕೆ ಹೆದ್ದಾರಿ ದರದ ಬದಲಾಗಿ ಸಾಮಾನ್ಯ ರಾಷ್ಟ್ರೀಯ ಹೆದ್ದಾರಿ ದರವನ್ನೇ ವಿಧಿಸಲಾಗುತ್ತದೆ.
ಎಕ್ಸ್ಪ್ರೆಸ್ವೇ ಶುಲ್ಕ ಸಾಮಾನ್ಯ ಹೆದ್ದಾರಿಗಳಿಗಿಂತ ಶೇಕಡ 25 ರಷ್ಟು ಹೆಚ್ಚಿರುತ್ತದೆ. ತಿದ್ದುಪಡಿ ಮೂಲಕ ಸವಾರರಿಗೆ ಹೆಚ್ಚಿನ ಹೊರೆಯನ್ನು ತಪ್ಪಿಸಲಾಗಿದೆ. ಹಳೆಯ ಮಾರ್ಗಗಳಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯಿಂದ ಹರಡುತ್ತಿದ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.
ಈ ಸೌಲಭ್ಯವು ಎಕ್ಸ್ಪ್ರೆಸ್ವೇ ಪೂರ್ಣಗೊಳ್ಳುವವರೆಗೆ ಅಥವಾ ಗರಿಷ್ಠ ಒಂದು ವರ್ಷದ ಅವಧಿವರೆಗೆ ಅನ್ವಯವಾಗಲಿದ್ದು, ಪ್ರಯಾಣಿಕರಿಗೆ ಆರ್ಥಿಕ ಉಳಿತಾಯ ಮತ್ತು ಸುಗಮ ಪ್ರಯಾಣದ ಭರವಸೆ ನೀಡಿದೆ.