ನವದೆಹಲಿ, ಫೆ. 19 (DaijiworldNews/TA): ಎಐ (ಕೃತಕ ಬುದ್ಧಿಮತ್ತೆ) ಇದನ್ನು ಭಯದಿಂದ ನೋಡಬಾರದು, ಭವಿಷ್ಯದ ಭಾಗ್ಯವೆಂದು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಭಾರತ್ ಮಂಪಟದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಭಾರತೀಯ ಯುವಕರ ಪ್ರತಿಭೆಯನ್ನು ಮೆಚ್ಚುತ್ತ, ದೇಶದ ಮೂರು ಕಂಪನಿಗಳು ಹೊಸ ಎಐ ಆ್ಯಪ್ಗಳನ್ನು ಲಾಂಚ್ ಮಾಡಿರುವುದು ಭಾರತದ ತಂತ್ರಜ್ಞಾನ ಕ್ಷೇತ್ರದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಯಂತ್ರ ಕಲಿಕೆ ಮಹತ್ವದ ಸಾಧನವಾಗಿದೆ, ಆದರೆ ಅದನ್ನು ಮಾನವನೇ ನಿಯಂತ್ರಿಸಬೇಕು. ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ ಎಐ ಬಿಟ್ಟುಬಿಡುತ್ತೇವೆ ಎಂಬುದರ ಬಗ್ಗೆ ನಾವು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಎಐ ಶಕ್ತಿಯು ಪರಮಾಣು ಶಕ್ತಿಯಂತೆ ಪರಿವರ್ತಕ ಶಕ್ತಿಯಾಗಿದ್ದು, ಅದರ ದೋಷ ಮತ್ತು ಲಾಭವನ್ನು ನಾವು ನೋಡಿದ್ದೇವೆ ಆದ್ದರಿಂದ, ಎಐ ನಮ್ಮ ವರ್ತಮಾನದಲ್ಲಿ ಹೇಗೆ ಉಪಯೋಗಿಸುತ್ತೇವೆ ಎಂಬುದು ಅತ್ಯಂತ ಮಹತ್ವಪೂರ್ಣವಾಗಿದೆ ಎಂದರು.
ಪ್ರಧಾನಿ ಮೋದಿ ಎಐನಲ್ಲಿ ಪಾರದರ್ಶಕತೆ ಮುಖ್ಯತೆಯನ್ನು ಕೂಡ ಒತ್ತಿ ಹೇಳಿದರು. ಎಐ ಮೂಲಕ ನಿರ್ಮಿತವಾದ ವಿಡಿಯೋಗಳು ವಾಸ್ತವಿಕವೋ, ಬೇರೆ ವಿಡಿಯೋವೋ ಎಂಬುದನ್ನು ಗುರುತಿಸಲು ವಾಟರ್ಮಾರ್ಕ್ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತ ಎಐಯನ್ನು ಭವಿಷ್ಯದ ಸಾಧನವೆಂದು ಮಾತ್ರ ಪರಿಗಣಿಸುತ್ತಿದ್ದು, ಅದನ್ನು ಜಾಗತಿಕ ಆಡಳಿತ ಅಥವಾ ಆಳುವ ಉದ್ದೇಶದಿಂದ ಅಲ್ಲ ಎಂಬುವುದಾಗಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.