ಬೆಂಗಳೂರು, ಫೆ. 26 (DaijiworldNews/AA): ಸಿಎಂ ಕುರ್ಚಿ ವಿಚಾರದಲ್ಲಿನ ಗೊಂದಲಗಳಿಗೆ ಹೈಕಮಾಂಡ್ ಉತ್ತರ ಕೊಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಪರಮೇಶ್ವರ್ ಸಿಎಂ ಆಗಬೇಕು ಎಂಬ ಅಭಿಮಾನಿಗಳ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸಿಎಂ ಕುರ್ಚಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿದೆ. ನಾನು ಅದಕ್ಕೆ ಹೆಚ್ಚು ಗೊಂದಲ ಮಾಡೋದಕ್ಕೆ ತಯಾರಿಲ್ಲ. ಅನೇಕರು ನನ್ನನ್ನ ಪ್ರಶ್ನೆ ಮಾಡ್ತಾರೆ, ಅಭಿಮಾನಿಗಳು ಅಲ್ಲಲ್ಲಿ ಸಿಎಂ ಅಗಬೇಕು ಅಂತ ಅವರ ಭಾವನೆ ವ್ಯಕ್ತಪಡಿಸುತ್ತಾರೆ. ಸಿಎಂ ಆಗಬೇಕು ಅಂತ ಘೋಷಣೆ ಕೂಗ್ತಾರೆ. ಇದಕ್ಕೆಲ್ಲಾ ಉತ್ತರ ಹೈಕಮಾಂಡ್ ಕೊಡಬೇಕು. ಹೈಕಮಾಂಡ್ ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ ಆ ಸಮಯದಲ್ಲಿ ತೀರ್ಮಾನ ಮಾಡ್ತಾರೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡೋದ್ರಲ್ಲಿ ಅರ್ಥ ಇಲ್ಲ. ಏಕೆಂದ್ರೆ ಅದರ ಬಗ್ಗೆ ಉತ್ತರ ಸಿಗೊಲ್ಲ. ಉತ್ತರ ಸಿಗಬೇಕಾಗಿರೋದು ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದರಿಂದ" ಎಂದು ಹೇಳಿದರು.
"ನಾನು ಯಾವತ್ತು ಲಾಬಿ ಮಾಡೋಕೆ ಹೋಗಿಲ್ಲ. ನಾನು ದೆಹಲಿಗೆ ಹೋಗಿಲ್ಲ. ನಾನು ಯಾವ ಲಾಬಿ ಮಾಡ್ತಿಲ್ಲ. ಅಲ್ಲಿ ಇಲ್ಲಿ ನಮ್ಮ ಹಿತೈಷಿಗಳು ಅಭಿಪ್ರಾಯ ಹೇಳಿರಬಹುದು. ಮಾಡಬೇಡಿ ಅಂತ ಹೇಳೋದು ಹೇಗೆ? 2-3 ಸಾರಿ ಹಾಗೆ ಮಾಡಬೇಡಿ ಅಂತ ಬೈದಿದ್ದೇನೆ. ಆದರೆ ಅವರ ಫೀಲಿಂಗ್ಸ್ ಎಕ್ಸ್ ಪ್ರೆಸ್ ಮಾಡ್ತಾರೆ. ಅದಕ್ಕೆ ನಾವೇನು ಮಾಡೋಕೆ ಆಗೊಲ್ಲ. ನಾನು ಈ ಗೊಂದಲಕ್ಕೆ ಕೈ ಜೋಡಿಸೋದಕ್ಕೆ ಹೋಗೊಲ್ಲ" ಎಂದರು.